ಭಾರತದಲ್ಲಿ ಮುಸ್ಲಿಮರ ಅಸ್ಮಿತೆ ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ: ಇಟಾಲಿಯನ್ ಲೇಖಕಿ ಡಾ.ಸಬ್ರಿನಾ ಲೇ

Prasthutha|

ದೋಹಾ: ಭಾರತದಲ್ಲಿ ಮುಸ್ಲಿಮರ ಅಸ್ಮಿತೆಯನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಕೆಲವರು ಸಾವಿರಾರು ವರ್ಷಗಳ ಇತಿಹಾಸವನ್ನು ನಿರಾಕರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು  ಮಲಯಾಳಂ ಸಾಹಿತ್ಯದ ಹಲವಾರು ಪುಸ್ತಕಗಳನ್ನು ಇಟಾಲಿಯನ್ ಭಾಷೆಗೆ ಭಾಷಾಂತರ ಮಾಡಿರುವ ಇಟಲಿಯ ಲೇಖಕಿ  ಡಾ. ಸಬ್ರಿನಾ ಲೇ ಹೇಳಿದರು.

- Advertisement -

ದೋಹಾ ಅಂತಾರಾಷ್ಟ್ರೀಯ ಅಂತರ್ ಧರ್ಮೀಯ ಸಂವಾದದಲ್ಲಿ ಪ್ರಶಸ್ತಿ ಪಡೆದ ನಾಲ್ವರಲ್ಲಿ ಒಬ್ಬರಾಗಿರುವ ಡಾ. ಸಬ್ರಿನಾ ಲೇ,  ನೀವು ಒಂದು ಗುರುತನ್ನು ಅಳಿಸಬಹುದು, ಆದರೆ ಎಲ್ಲಾ ಕುರುಹುಗಳನ್ನು ಅಳಿಸಲು ಸಾಧ್ಯವಿಲ್ಲ. ಭಾರತದಲ್ಲಿನ ಮಸೀದಿಗಳ ವಿಷಯ ಮತ್ತು ಹಿಜಾಬ್ ವಿಷಯದ ಹಿಂದೆ ಕೆಲವು ರಾಜಕೀಯ ಆಟಗಳಿವೆ ಮತ್ತು ಕೆಲವು ರಾಜಕಾರಣಿಗಳು ಮಿತಿಮೀರಿ ಹೋಗುತ್ತಿದ್ದಾರೆ. ದ್ವೇಷ ಭಾಷಣಗಳು ಮತ್ತು ಪರಕೀಯತೆಯು ವಿಶ್ವಾದ್ಯಂತದ ಮುಸ್ಲಿಮರ ವಿಶ್ವಾಸವನ್ನು ಹಾನಿಗೊಳಿಸುತ್ತಿದೆ ಎಂದು ಮಾಧ್ಯಮ ಸಂದರ್ಶನದಲ್ಲಿ ಹೇಳಿದರು.

“ದ್ವೇಷ ಭಾಷಣಗಳು ಮುಸ್ಲಿಮರನ್ನು ಮುಖ್ಯವಾಹಿನಿಯಿಂದ ದೂರವಿಡುತ್ತಿವೆ. ದೇಶದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಲಯಗಳಿಂದ ದೂರ ಸರಿಯುವುದು ಅಪಾಯಕಾರಿ. ಸಾಮಾಜಿಕ ಮಾಧ್ಯಮಗಳಲ್ಲಿ ದ್ವೇಷದ ಪ್ರಚಾರಗಳು ವೇದಿಕೆಯನ್ನು ಮುರಿಯುತ್ತಿವೆ. ಅಂತಹ ಪ್ರವೃತ್ತಿಗಳನ್ನು ತೊಡೆದುಹಾಕಲು ಧಾರ್ಮಿಕ ನಾಯಕತ್ವವನ್ನು ಸುಧಾರಿಸಬೇಕು, ಆ ಮೂಲಕ ಅಂತರ್-ಧರ್ಮೀಯ ಚರ್ಚೆಗಳಿಗೆ ದಾರಿ ಮಾಡಿಕೊಡಬೇಕು” ಎಂದು ಅವರು ಹೇಳಿದರು.

- Advertisement -

ಜಾಗತೀಕರಣವು ಕೇವಲ ಆರ್ಥಿಕ ಶೋಷಣೆಯ ಸಾಧನವಾಗದೆ ಆಲೋಚನೆಗಳ ವಿನಿಮಯಕ್ಕೆ ಒಂದು ವೇದಿಕೆಯಾಗಬೇಕು ಎಂದು ಅವರು ನೆನಪಿಸಿದರು.

Join Whatsapp