Home ಟಾಪ್ ಸುದ್ದಿಗಳು ನೆಲ್ಯಾಡಿ: ನಿವೃತ್ತ ಯೋಧನಿಗೆ ಅದ್ಧೂರಿ ಸ್ವಾಗತ

ನೆಲ್ಯಾಡಿ: ನಿವೃತ್ತ ಯೋಧನಿಗೆ ಅದ್ಧೂರಿ ಸ್ವಾಗತ

ನೆಲ್ಯಾಡಿ: ಭಾರತೀಯ ಸೇನೆಯಲ್ಲಿ 28 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿ ತಾಯ್ನಾಡಿಗೆ ಆಗಮಿಸಿದ ಇಚ್ಲಾಂಪಾಡಿ ಗ್ರಾಮದ ಮಾನಡ್ಕ ನಿವಾಸಿ ಸುಬೇದಾರ್ ಮಧು ಕುಮಾರ್ ಗೆ ಭಾನುವಾರ ಶ್ರೀ ಸಿದ್ದಿ ವಿನಾಯಕ ಭಜನಾ ಮಂದಿರದಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು.

ನಿವೃತ್ತ ಯೋಧನನ್ನು ರಾಜ್ಯ ಹೆದ್ದಾರಿ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಗೆಳೆಯರು, ಅಭಿಮಾನಿಗಳು, ನಾನಾ ಸಮಾಜದ ಮುಖಂಡರು, ಆಟೋ ಚಾಲಕರು ಹಾಗೂ ಮಾಲೀಕರು, ವ್ಯಾಪಾರಸ್ಥರು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿ ಹೂವಿನ ಸುರಿಮಳೆಗೈದರು.


ಮಧು ಕುಮಾರ್ ಮಾತನಾಡಿ, “ಯೋಧರಿಗೆ ಸಾರ್ವಜನಿಕರು ನೀಡುವ ಗೌರವವನ್ನು ನೋಡಿದರೆ ಸೈನಿಕ ಸೇವೆ ಬಗ್ಗೆ ಅತ್ಯಂತ ಹೆಮ್ಮೆ ಎನಿಸುತ್ತಿದೆ. ತನ್ನ ಕುಟುಂಬದಲ್ಲಿ 8 ಮಂದಿ ಸೈನಿಕ ವೃತ್ತಿ ಮಾಡಿರುವುದಾಗಿ ಹೇಳಿಕೊಳ್ಳಲು ಹೆಮ್ಮೆ ಇದೆ ಎಂದರು.

Join Whatsapp
Exit mobile version