Home ಟಾಪ್ ಸುದ್ದಿಗಳು ಆರ್ಯನ್ ಖಾನ್ ಅಪಹರಣಕ್ಕೆ ಸಮೀರ್ ವಾಂಖೆಡೆ ಸಂಚು: ಮುಂಬೈ ಸಚಿವ ನವಾಬ್ ಮಲಿಕ್ ಗಂಭೀರ ಆರೋಪ

ಆರ್ಯನ್ ಖಾನ್ ಅಪಹರಣಕ್ಕೆ ಸಮೀರ್ ವಾಂಖೆಡೆ ಸಂಚು: ಮುಂಬೈ ಸಚಿವ ನವಾಬ್ ಮಲಿಕ್ ಗಂಭೀರ ಆರೋಪ

ಮುಂಬೈ: ಮುಂಬೈ ಡ್ರಗ್ಸ್ ಪ್ರಕರಣದಲ್ಲಿ ಬಂಧಿತ ಆರ್ಯನ್ ಖಾನ್ ಅವರನ್ನು ಎನ್.ಸಿ.ಬಿ ಅಧಿಕಾರಿಯಾಗಿದ್ದ ಸಮೀರ್ ವಾಂಖೆಡೆ ಅಪಹರಿಸಲು ಸಂಚು ರೂಪಿಸಿದ್ದರು ಎಂದು ಮಹಾರಾಷ್ಟ್ರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ, ಎನ್.ಸಿ.ಪಿ ವಕ್ತಾರ ನವಾಬ್ ಮಲಿಕ್ ಗಂಭೀರ ಆರೋಪ ಹೊರಿಸಿದ್ದಾರೆ.

ಮುಂಬೈನಲ್ಲಿ ಭಾನುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಲಿಕ್ ಈ ಹೇಳಿಕೆ ನೀಡಿದ್ದಾರೆ.

ಮಾತ್ರವಲ್ಲ ಬಿಜೆಪಿ ನಾಯಕ ಮೋಹಿತ್ ಕಾಂಬೋಜ್ ಎಂಬಾತನೇ ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣದ ಮಾಸ್ಟರ್ ಮೈಂಡ್. ಈತ ಸುಲಿಗೆ ಮತ್ತು ಅಪಹರಣಕ್ಕೆ ಸಂಬಂಧಿಸಿದಂತೆ ಸಮೀರ್ ವಾಂಖೆಡ್ ಗೆ ನೆರವಾಗುತ್ತಿದ್ದ ಎಂದು ಅವರು ಆರೋಪಿಸಿದರು.

ಸದ್ಯ ಆರ್ಯನ್ ಪ್ರಕರಣದಲ್ಲಿ ಸಮೀರ್ ವಾಂಖೆಡೆ ಅವರನ್ನು ಎನ್.ಸಿ.ಬಿ ತನಿಖಾ ತಂಡದಿಂದ ತೆರವುಗೊಳಿಸಿದ್ದು, ಅವರ ಸ್ಥಾನಕ್ಕೆ ಹಿರಿಯ ಐಪಿಎಸ್ ಅಧಿಕಾರಿ ಸಂಜಯ್ ಸಿಂಗ್ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದೆ.

Join Whatsapp
Exit mobile version