ಪತ್ರಕರ್ತನ ಮೇಲೆ ಹಲ್ಲೆ| ಎನ್.ಆರ್. ಠಾಣೆಯ ಕಾನ್ಸ್‌ಟೇಬಲ್ ಅಮಾನತು

Prasthutha|

ಮೈಸೂರು: ಪತ್ರಕರ್ತನೊಬ್ಬನ ಮೇಲೆ ಹಲ್ಲೆ ನಡೆಸಿದ್ದ ಎನ್.ಆರ್ ಠಾಣೆಯ ಕಾನ್ಸ್’ಟೇಬಲ್ ನನ್ನು ಅಮಾನತು ಮಾಡಲಾಗಿದೆ.

- Advertisement -


ಷಷ್ಠಿ ಹಬ್ಬದ ವರದಿ ಮಾಡಲು ತೆರಳಿದ್ದ ಸ್ಥಳೀಯ ಖಾಸಗಿ ವಾಹಿನಿಯೊಂದರ ಪತ್ರಕರ್ತನ ಮೇಲೆ ಎನ್.ಆರ್ ಠಾಣೆಯ ಕಾನ್ಸ್’ಟೇಬಲ್ ಹಲ್ಲೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಹಲ್ಲೆ ನಡೆಸಿದ್ದ ಕಾನ್ಸ್’ಟೇಬಲ್ ಲೋಕೇಶ್ ನನ್ನು ಅಮಾನತುಗೊಳಿಸಿ ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.


ಕರ್ತವ್ಯ ವೇಳೆ ದುರ್ನಡತೆ ಪ್ರದರ್ಶಿಸಿದ ಆರೋಪ ಮೇಲ್ನೋಟಕ್ಕೆ ಸಾಬೀತಾಗಿರುವ ಕಾರಣ ಲೋಕೇಶ್ ನನ್ನು ಅಮಾನತು ಮಾಡಲಾಗಿದೆ.

- Advertisement -

ಗುರುವಾರ ಬೆಳಗ್ಗೆ ಸಿದ್ದಲಿಂಗಪುರ ಸುಬ್ರಹ್ಮಣ್ಯ ದೇವಾಲಯದಲ್ಲಿ ನಡೆಯುತ್ತಿದ್ದ ಷಷ್ಠಿ ಪೂಜೆಯ ವರದಿ ಮಾಡಲು ತೆರಳಿದ್ದ ಸ್ಥಳೀಯ ಖಾಸಗಿ ವಾಹಿನಿಯ ಕ್ಯಾಮರಾಮ್ಯಾನ್ ಸತೀಶ್ ಅವರನ್ನು ದೇಗುಲದ ಹೊರಗೆ ಅಡ್ಡ ಹಾಕಿದ ನರಸಿಂಹರಾಜ (ಎನ್.ಆರ್) ಠಾಣೆಯ ಕಾನ್ಸ್‌ಟೇಬಲ್ ಲೋಕೇಶ್ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅಲ್ಲದೇ ಲಾಠಿಯಿಂದ ಥಳಿಸಿ ನೆಲಕ್ಕೆ ಬೀಳಿಸಿ ತೀವ್ರವಾಗಿ ಹಲ್ಲೆ ನಡೆಸಿದ್ದರು ಎಂದು ವರದಿಯಾಗಿತ್ತು.

Join Whatsapp