ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣ: ಆಘಾತದಲ್ಲಿರುವ ಸಂತ್ರಸ್ತೆಯ ಹೇಳಿಕೆ ಪಡೆದಿಲ್ಲ ಎಂದ ಗೃಹ ಸಚಿವರು

Prasthutha|

ಬೆಂಗಳೂರು: ಸಾಂಸ್ಕೃತಿಕ ನಗರಿ ಮೈಸೂರು ಸಾಮೂಹಿಕ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ತೀವ್ರ ಆಘಾತದಲ್ಲಿರುವುದರಿಂದ ಆಕೆಯ ಹೇಳಿಕೆಯನ್ನು ಇದುವರೆಗೆ ಪಡೆದಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.

- Advertisement -


ಮಹಾರಾಷ್ಟ್ರ ಮೂಲದ ಮೈಸೂರಿನ ಖಾಸಗಿ ಕಾಲೇಜಿನಲ್ಲಿ ಓದುತ್ತಿರುವ ಯುವತಿ ಮೊನ್ನೆ ಮಂಗಳವಾರ ಸಾಮೂಹಿಕವಾಗಿ ಅತ್ಯಾಚಾರಕ್ಕೊಳಗಾಗಿ ಆಸ್ಪತ್ರೆಯಲ್ಲಿದ್ದಾಳೆ. ಘಟನಾ ಸಂಬಂಧ ದುಷ್ಕರ್ಮಿಗಳನ್ನು ಅಧಿಕೃತವಾಗಿ ಈವರೆಗೆ ಬಂಧಿಸಲಾಗಿಲ್ಲ. ಮಂಗಳವಾರ ಸಂಜೆ 7.30 ಕ್ಕೆ ಸಂತ್ರಸ್ತೆ ಯುವತಿ ತನ್ನ ಸಹಪಾಠಿ ಯುವಕನೊಂದಿಗೆ ಮೈಸೂರಿನ ಹೊರವಲಯದ ಜನಪ್ರಿಯ ಸ್ಥಳವಾದ ಚಾಮುಂಡಿ ಬೆಟ್ಟಕ್ಕೆ ತೆರಳಿದ್ದಳು.


ಘಟನೆಗೆ ಮೊದಲು ಕಾಡಿನ ಕಡೆಗೆ ತೆರಳುತ್ತಿದ್ದ ಈ ಇಬ್ಬರನ್ನು ಹಿಂಬಾಲಿಸಿದ ಮದ್ಯಪಾನಿಗಳಾದ 6 ಮಂದಿಯ ದುಷ್ಕರ್ಮಿಗಳ ತಂಡ ಯುವಕನಿಗೆ ಗಂಭೀರವಾಗಿ ಹಲ್ಲೆ ನಡೆಸಿ, ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿತ್ತು. ಗಂಭೀರವಾಗಿ ಗಾಯಗೊಂಡ ಈ ಇಬ್ಬರು ಪ್ರಸಕ್ತವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Join Whatsapp