ಮೈಸೂರು ದಸರಾ| ಗಜಪಡೆಗೆ 30 ಲಕ್ಷ ರೂ. ವಿಮೆ ಘೋಷಿಸಿದ ರಾಜ್ಯ ಸರ್ಕಾರ

Prasthutha|

ಮೈಸೂರು: ಮೈಸೂರು ದಸರಾದಲ್ಲಿ ಭಾಗಿಯಾಗಲು ಆಗಮಿಸಿರುವ ಗಜಪಡೆಗೆ ರಾಜ್ಯ ಸರ್ಕಾರ 30 ಲಕ್ಷ ರೂ.ಗಳ ವಿಮೆ ಘೋಷಣೆ ಮಾಡಿದೆ.

- Advertisement -

ಸಾರ್ವಜನಿಕ ಆಸ್ತಿ ಹಾನಿಯಾದರೆ ನಷ್ಟ ಭರಿಸಲು ಸೆಪ್ಟೆಂಬರ್ 13 ರಿಂದ ಅಕ್ಟೋಬರ್ 24 ರವರೆಗೆ ಚಾಲ್ತಿಯಲ್ಲಿರುವಂತೆ ಅಭಿಮನ್ಯು ನೇತೃತ್ವದ 8 ಆನೆಗಳು, ಮಾವುತರು, ಕಾವಾಡಿಗಳಿಗೆ ವಿಮೆ ಮಾಡಿಸಲಾಗಿದೆ ಎಂದು ಡಿಸಿಎಫ್ ಕರಿಕಾಳನ್ ಹೇಳಿದ್ದಾರೆ.

ಗಂಡಾನೆಗಳಾದ ಅಭಿಮನ್ಯು, ವಿಕ್ರಮ, ಧನಂಜಯ, ಗೋಪಾಲಸ್ವಾಮಿ ಹಾಗೂ ಅಶ್ವತ್ಥಾಮಗೆ 3.5 ಲಕ್ಷ ರೂ. ಹೆಣ್ಣಾನೆಗಳಾದ ಚೈತ್ರಾ, ಕಾವೇರಿ ಹಾಗೂ ಲಕ್ಷ್ಮೀಗೆ 2.5 ಲಕ್ಷ ರೂ.ವಿಮೆ ಘೋಷಣೆ ಮಾಡಲಾಗಿದೆ. 16 ಮಂದಿ ಮಾವುತರು ಹಾಗೂ ಕಾವಾಡಿಗಳಿಗೆ 1 ಲಕ್ಷ ರೂ. ವಿಮೆ ಘೋಷಣೆ ಮಾಡಲಾಗಿದೆ.

Join Whatsapp