Home ಟಾಪ್ ಸುದ್ದಿಗಳು ಶಿವಸೇನೆಯನ್ನು ಮಹಾ ಆಘಾಡಿ ಹಿಡಿತದಿಂದ ಕಾಪಾಡಲು ನನ್ನ ಹೋರಾಟ: ಏಕನಾಥ್ ಶಿಂಧೆ

ಶಿವಸೇನೆಯನ್ನು ಮಹಾ ಆಘಾಡಿ ಹಿಡಿತದಿಂದ ಕಾಪಾಡಲು ನನ್ನ ಹೋರಾಟ: ಏಕನಾಥ್ ಶಿಂಧೆ

ಮುಂಬೈ: ಮಹಾ ವಿಕಾಸ್ ಆಘಾಡಿ (ಎಂವಿಎ) ಹಿಡಿತದಿಂದ ಪಕ್ಷವನ್ನು ಕಾಪಾಡಲು ನಾನು ಹೋರಾಡುತ್ತಿದ್ದೇನೆ ಎಂಬುದನ್ನು ಶಿವಸೇನೆ ಕಾರ್ಯಕರ್ತರು ಅರ್ಥಮಾಡಬೇಕೆಂದು ಬಂಡಾಯ ನಾಯಕ ಏಕನಾಥ್ ಶಿಂಧೆ ತಿಳಿಸಿದ್ದಾರೆ.

ಪಕ್ಷದ ಅಧ್ಯಕ್ಷ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ನಿಷ್ಠರಾಗಿರುವ ಶಿವಸೇನಾ ಕಾರ್ಯಕರ್ತರು, ಬಂಡಾಯ ಶಾಸಕರ ಬ್ಯಾನರ್’ಗಳನ್ನು ವಿರೂಪಗೊಳಿಸಿ, ಕೆಲವು ಸ್ಥಳಗಳಲ್ಲಿ ಕಲ್ಲು ಎಸೆದು ಕಚೇರಿಯನ್ನು ಧ್ವಂಸಗೊಳಿಸಿದ ಬಳಿಕ ಶಿಂಧೆ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.

ಈ ಕುರಿತು ಮಾರಾಠಿಯಲ್ಲಿ ಟ್ವೀಟ್ ಮಾಡಿರುವ ಶಿಂಧೆ, ನನ್ನ ಪ್ರೀತಿಯ ಶಿವಸೇನಾ ಕಾರ್ಯಕರ್ತರೇ, ಎಂವಿಎಯ ಕುತಂತ್ರವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಎಂವಿಎ ಎಂಬ ಹೆಬ್ಬಾವಿನ ಹಿಡಿತದಿಂದ ಶಿವಸೇನೆ ಮತ್ತು ಕಾರ್ಯಕರ್ತರನ್ನು ರಕ್ಷಿಸಲು ನಾನು ಹೋರಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ನಾನು ಈ ಹೋರಾಟವನ್ನು ಶಿವಸೇನೆ ಕಾರ್ಯಕರ್ತರ ಹಿತಾಸಕ್ತಿಗಾಗಿ ಅರ್ಪಿಸುತ್ತೇನೆ ಎಂದ ಅವರು, ಕಾಂಗ್ರೆಸ್ ಮತ್ತು ಎನ್.ಸಿ.ಪಿ ಜೊತೆಗಿನ ಅಸ್ವಾಭಾವಿಕ ಮಹಾ ವಿಕಾಸ್ ಆಘಾಡಿ ಮೈತ್ರಿಯಿಂದ ಶಿವಸೇನೆ ಹೊರಬಂದು ಬಿಜೆಪಿಯೊಂದಿಗೆ ಮೈತ್ರಿಯನ್ನು ಪುನರುಜ್ಜೀವನಗೊಳಿಸಬೇಕೆಂದು ಶಿಂಧೆ ಮತ್ತು ಬೆಂಬಲಿಗರು ಈ ಮೊದಲು ತಿಳಿಸಿದ್ದರು.

Join Whatsapp
Exit mobile version