Home ಟಾಪ್ ಸುದ್ದಿಗಳು ನಾಥೂರಾಮ ಗೋಡ್ಸೆ ಪೂಜಕರಿಗೆ ಮುಸ್ಲಿಮರು ಎಂದೂ ಮತ ಹಾಕುವುದಿಲ್ಲ: ಇಕ್ಬಾಲ್ ಮಹಮೂದ್

ನಾಥೂರಾಮ ಗೋಡ್ಸೆ ಪೂಜಕರಿಗೆ ಮುಸ್ಲಿಮರು ಎಂದೂ ಮತ ಹಾಕುವುದಿಲ್ಲ: ಇಕ್ಬಾಲ್ ಮಹಮೂದ್

ಲಕ್ನೋ: ಮುಸ್ಲಿಮರು ಎಂದಿಗೂ ಬಿಜೆಪಿಗೆ ಮತ ಹಾಕುವುದಿಲ್ಲ. ಯಾಕೆಂದರೆ ನಾಥೂರಾಮ ಗೋಡ್ಸೆಯನ್ನು ಪೂಜಿಸುವ ಅವರು ನಂಬಿಕಾರ್ಹರಲ್ಲ ಎಂದು ಸಂಬಾಲ್ ನ ಸಮಾಜವಾದಿ ಪಕ್ಷದ ಶಾಸಕ ಇಕ್ಬಾಲ್ ಮಹಮೂದ್ ಹೇಳಿದರು.

ಅಸದುದ್ದೀನ್ ಉವೈಸಿಯವರ ಎಐಎಂಐಎಂ- ಮಜ್ಲಿಸೆ ಇತ್ತೆಹಾದುಲ್ ಮುಸ್ಲಿಮೀನ್ ಪಕ್ಷವನ್ನು ಬಿಜೆಪಿ- ಭಾರತೀಯ ಜನತಾ ಪಕ್ಷದ ಬಿ ಟೀಮ್ ಎಂದು ಹೇಳಿದರು.

ಇತ್ತೀಚೆಗೆ ಬಿಜೆಪಿಯವರು ಲಕ್ನೋದಲ್ಲಿ ಪಸ್ಮಂದಾ ಮುಸ್ಲಿಮರ ಜೊತೆಗೆ ನಡೆಸಿದ ಸಭೆಯನ್ನು ಪ್ರಸ್ತಾಪಿಸಿದ ಇಕ್ಬಾಲ್ ಮೆಹಮೂದ್ ಅವರು, “ಒಬ್ಬ ನೈಜ ಮುಸ್ಲಿಮನು ಎಂದಿಗೂ ಬಿಜೆಪಿಗೆ ಮತ ಹಾಕುವುದು ಸಾಧ್ಯವಿಲ್ಲ. ಏಕೆಂದರೆ ಭಾರತೀಯ ಜನತಾ ಪಕ್ಷ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಯಾವತ್ತಿಗೂ ಮುಸ್ಲಿಮರಿಗಾಗಿ ಇರಲಿಲ್ಲ. ಮಹಾತ್ಮಾ ಗಾಂಧೀಜಿಯವರನ್ನು ಕೊಂದ ನಾಥೂರಾಮ ಗೋಡ್ಸೆಯನ್ನು ಆರಾಧಿಸುವವರನ್ನು ಎಂದಿಗೂ ನಂಬುವುದಿಲ್ಲ” ಎಂದು ಅವರು ಹೇಳಿದರು.

“ಬಿಎಸ್ ಪಿ- ಬಹಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿಯವರು ಕೇಂದ್ರೀಯ ತನಿಖಾ ಸಂಸ್ಥೆಗಳಾದ ಸಿಬಿಐ ಮತ್ತು ಇಡಿ ಮೊದಲಾದವಕ್ಕೆ ಹೆದರಿರುವುದರಿಂದ ಬಿಜೆಪಿಯ ವಿರುದ್ಧ ಏನೇನೂ ಮಾತನಾಡುವುದಿಲ್ಲ” ಎಂದೂ ಮಹಮೂದ್ ಆರೋಪಿಸಿದರು.

“ಇಡೀ ದೇಶದಲ್ಲಿ ಬಿಜೆಪಿ ವಿರುದ್ಧ ಹೋರಾಡುತ್ತಿರುವ ಪಕ್ಷವೆಂದರೆ ಎಸ್ ಪಿ- ಸಮಾಜವಾದಿ ಪಕ್ಷ ಮಾತ್ರ ಎಂದು ಅವರು ಹೇಳಿದರು.

Join Whatsapp
Exit mobile version