ಉತ್ತರ ಪ್ರದೇಶ | ಮುಸ್ಲಿಮ್ ವೃದ್ಧನಿಗೆ ಪಿಸ್ತೂಲ್ ತೋರಿಸಿ ಗಡ್ಡ ಕತ್ತರಿಸಿದ ಹಿಂದುತ್ವ ಪಡೆ

Prasthutha|

ಮುಸ್ಲಿಮ್ ವೃದ್ಧರೊಬ್ಬರಿಗೆ ಐವರು ಗೂಂಡಾಗಳು ತೀವ್ರವಾಗಿ ಥಳಿಸಿ, ಪಿಸ್ತೂಲ್ ತೋರಿಸಿ ಬಲವಂತವಾಗಿ ಅವರ ಗಡ್ಡವನ್ನು ಕತ್ತರಿಸಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ನಡೆದಿದೆ.

- Advertisement -

ಸೂಫಿ ಅಬ್ದುಲ್ ಸಮದ್ ಸೈಫಿ ಹಲ್ಲೆಗೊಳಗಾದ ಮುಸ್ಲಿಮ್ ವೃದ್ಧ. ಅವರನ್ನು ನಾಲ್ಕೈದು ಮಂದಿಯಿದ್ದ ಗೂಂಡಾ ಪಡೆ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು, ದೊಣ್ಣೆಯಿಂದ ತೀವ್ರವಾಗಿ ಥಳಿಸಿದೆ, ಈ ವೇಳೆ ವೃದ್ಧರು ನೋವು ತಾಳಲಾರದೆ …ಅಲ್ಲಾಹ್… ಅಲ್ಲಾಹ್ … ಎಂದು ಉಚ್ಛರಿಸುತ್ತಿದ್ದರು. ಆಗ ದುಷ್ಕರ್ಮಿಗಳು ಅಲ್ಲಾಹನ ಹೆಸರು ಹೇಳಬಾರದು, ಜೈಶ್ರೀರಾಮ್ ಹೇಳು ಎಂದು ಪಿಸ್ತೂಲ್ ತಲೆಗೆ ಇಟ್ಟು, ಕೊಲೆ ಬೆದರಿಕೆ ಹಾಕಿ, ಗಡ್ಡವನ್ನು ಬಲವಂತವಾಗಿ ಕತ್ತರಿಸಿದ್ದಾರೆ. ಈ ದೃಶ್ಯವನ್ನು ಮೊಬೈಲ್ ನಲ್ಲಿ ದುಷ್ಕರ್ಮಿಗಳು ಚಿತ್ರೀಕರಿಸಿದ್ದಾರೆ.

https://twitter.com/zoo_bear/status/1404333656542306306

ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೋದಲ್ಲಿ ಸಂತ್ರಸ್ತ ವೃದ್ಧ ನಡೆದ ಘಟನೆಯನ್ನು ನೋವಿನಿಂದ ಹೇಳುತ್ತಿರುವುದು ಕಾಣುತ್ತಿದೆ.

Join Whatsapp