ಬಿಹಾರದಲ್ಲಿ ವಿದ್ಯುತ್ ದುರಸ್ತಿಗೆಂದು ಕರೆದುಕೊಂಡು ಹೋಗಿ ಎಲೆಕ್ಟ್ರಿಶಿಯನನ್ನು ಗುಂಪು ಹತ್ಯೆಗೈದ ಹಂತಕರ ತಂಡ !

Prasthutha|

►ಕಳೆದ ವರ್ಷ ನಡೆದಿದ್ದ ಗುಂಪು ಹತ್ಯೆಯಲ್ಲೂ ಪಾಲ್ಗೊಂಡಿದ್ದ ಆರೋಪಿ ದೋಮರ್ ಯಾದವ್!

- Advertisement -

ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ಭಾನುವಾರ ಮಧ್ಯರಾತ್ರಿ 30 ವರ್ಷದ ಎಲೆಕ್ಟ್ರಿಶಿಯನ್ ಮೊಹಮ್ಮದ್ ಇಸ್ಮಾಯಿಲ್ ಎಂಬವರನ್ನು ಗುಂಪು ಹತ್ಯೆ ಮಾಡಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ರೂಪೇಶ್ ಯಾದವ್ ಎಂಬ ಹಂತಕನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಕುಟುಂಬದವರು ಹೇಳುವ ಪ್ರಕಾರ, ವೃತ್ತಿಯಲ್ಲಿ ಎಲೆಕ್ಟ್ರಿಶಿಯನ್ ಆಗಿರುವ ಮೊಹಮ್ಮದ್ ಇಸ್ಮಾಯೀಲ್ ಅವರು ಭಾನುವಾರ ರಾತ್ರಿ ತನ್ನ ಪ್ರದೇಶದಲ್ಲಿನ ಕಂಬದಲ್ಲಿ ವಿದ್ಯುತ್ ಕೇಬಲ್ ಅಳವಡಿಸುತ್ತಿದ್ದರು. ಈ ವೇಳೆ ಮೋಟಾರು ಬೈಕಿನಲ್ಲಿ ಬಂದ ಬಂದ ಇಬ್ಬರ ತಂಡವೊಂದು ನಮ್ಮ ಪ್ರದೇಶದಲ್ಲಿ ಕೆಲವೊಂದು ವಿದ್ಯುತ್ ದುರಸ್ತಿ ಕೆಲಸಗಳು ಆಗಬೇಕಿದೆ. ನಮ್ಮೊಂದಿಗೆ ಬರುವಂತೆ ಹೇಳಿ ಇಸ್ಮಾಯೀಲ್ ಅವರನ್ನು ತಮ್ಮ ಜೊತೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆ ಬಳಿಕ ಇಸ್ಮಾಯೀಲ್ ವಾಪಾಸ್ ಬಂದಿರಲಿಲ್ಲ. ಈ ತಂಡವೇ ಇಸ್ಮಾಯೀಲ್ ಅವರನ್ನು ಕೊಂದಿದೆ ಎಂದು ಅವರ ಚಿಕ್ಕಪ್ಪ ಮೊಯಿನ್ ಅಹ್ಮದ್ ಹೇಳಿದ್ದಾರೆ. ಬಲ್ವಾಯಿ ಗ್ರಾಮದ ನಿವಾಸಿಯಾಗಿರುವ ಇಸ್ಮಾಯಿಲ್ ಅವರು ಪತ್ನಿ ಮಸರತ್, ಮೂವರು ಮಕ್ಕಳು ಮತ್ತು 70 ವರ್ಷದ ತಂದೆ ಶೋಯಿಬ್ ಅವರನ್ನು ಅಗಲಿದ್ದಾರೆ.

- Advertisement -

ಕೊಲೆಗೈದ ಹಂತಕರ ತಂಡವನ್ನು ದೋಮರ್ ಯಾದವ್, ಸಸ್ತಾನ್ ಯಾದವ್, ಚೋಟ ಯಾದವ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಚಸಾಯ್ ಗ್ರಾಮದ ಯಾದವ ಸಮುದಾಯದ ಯುವಕರಾಗಿದ್ದಾರೆ ಎನ್ನಲಾಗಿದೆ. ಇವರಲ್ಲಿ ದೋಮರ್ ಯಾದವ್ ಕಳೆದ ವರ್ಷ ಈ ಪ್ರದೇಶದಲ್ಲಿ ನಡೆದಿದ್ದ ಗುಂಪು ಹತ್ಯೆಯಲ್ಲಿ ಕೂಡಾ ಪಾಲ್ಗೊಂಡಿದ್ದ ಎನ್ನಲಾಗಿದೆ.

ಆದರೆ ಎಂದಿನಂತೆ ಪೊಲೀಸರ ನಡೆ ಇಲ್ಲಿಯೂ ಸಂದೇಹಾಸ್ಪದವಾಗಿದೆ. ಇಸ್ಮಾಯೀಲ್ ಮತ್ತು ಇನ್ನೋರ್ವ ಮನೆಯೊಂದರಲ್ಲಿ ಕಳ್ಳತನಕ್ಕೆಂದು ಹೋಗಿದ್ದರು. ಆ ವೇಳೆ ಇನ್ನೋರ್ವ ತಪ್ಪಿಸಿಕೊಂಡಿದ್ದು, ಇಸ್ಮಾಯೀಲ್ ಅವರು ಗುಂಪಿನ ಕೈಗೆ ಸಿಕ್ಕಿ ಹಾಕಿಕೊಂಡು, ಅವರಿಂದ ಥಳಿಸಲ್ಪಟ್ಟು ಕೊಲೆಯಾಗಿದ್ದಾರೆ ಎಂದು ಜೋಕಿಹತ್ ಪೊಲೀಸ್ ಠಾಣೆಯ ಅಧಿಕಾರಿ ವಿಕಾಸ್ ಕುಮಾರ್ ‘ಕ್ಲಾರಿಯಾನ್’ ಗೆ ತಿಳಿಸಿದ್ದಾರೆ.

Join Whatsapp