Home ಟಾಪ್ ಸುದ್ದಿಗಳು ಉತ್ತರ ಪ್ರದೇಶದಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯಿಸಿ ಮುಸ್ಲಿಮ್ ಬಾಲಕನಿಗೆ ಗಂಭೀರ ಹಲ್ಲೆ

ಉತ್ತರ ಪ್ರದೇಶದಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯಿಸಿ ಮುಸ್ಲಿಮ್ ಬಾಲಕನಿಗೆ ಗಂಭೀರ ಹಲ್ಲೆ

ಉತ್ತರ ಪ್ರದೇಶದಲ್ಲಿ ಹಿಂದುತ್ವ ಶಕ್ತಿಗಳ ಪೈಶಾಚಿಕ ಕೃತ್ಯಗಳು ಮುಂದುವರಿದಿದ್ದು, ಜೈಶ್ರೀರಾಮ್ ಘೋಷಣೆ ಕೂಗುವಂತೆ ಮುಸ್ಲಿಮ್ ಯುವಕನೊಬ್ಬನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ಘಾಜಿಯಾಬಾದ್ ಜಿಲ್ಲೆಯ ಬೋಜ್ ಪುರ್ ನಲ್ಲಿ ನಡೆದಿದೆ. ಝೀಶನ್ ಗೂಂಡಾಗಳಿಂದ ಹಲ್ಲೆಗೊಳಗಾದ ವ್ಯಕ್ತಿ.

ಈ ಸಂಬಂಧ ಹಲ್ಲೆಗೊಳಗಾದ ಝೀಶನ್  ಆರೋಪಿಗಳ ವಿರುದ್ಧ ದೂರು ನೀಡಲು ಪೊಲೀಸ್ ಠಾಣೆಗೆ ಹೋದಾಗ, ದೂರಿನಲ್ಲಿ ಬರೆದಿದ್ದ ಜೈ ಶ್ರೀರಾಮ್ ಪದವನ್ನು ತೆಗೆದುಹಾಕುವಂತೆ ಪೊಲೀಸ್ ಅಧಿಕಾರಿ ಝೀಶನ್ ಗೆ ಸೂಚಿಸಿದ್ದಾರೆ.ಪ್ರಕರಣ ಸಂಬಂಧ ಇದುವರೆಗೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಈ ಸಂಬಂಧ ಸಾಮಾಜಿಕ ಕಾರ್ಯಕರ್ತ ಮುಹಮ್ಮದ್ ಆಸಿಫ್ ಖಾನ್ ಟ್ವಿಟ್ಟರ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಿದ್ದು, ನೆಲದ ಮೇಲೆ ಬಿದ್ದಿರುವ ಬಾಲಕ ನೋವಿನಿಂದ ಅರಚುತ್ತಿರುವುದು ಕಂಡುಬರುತ್ತಿದೆ. ಆತನ ಸುತ್ತಮುತ್ತ ಕೆಲವು ಯುವಕರು ನಿಂತಿರುವುದು ಕಂಡುಬರುತ್ತಿದೆ.ಈ ಹಿಂದೆ ಗಾಜಿಯಾಬಾದ್ ನಲ್ಲಿ ಮುಸ್ಲಿಂ ಬಾಲಕ ದೇವಸ್ಥಾನದ ನೀರನ್ನು ಕುಡಿದ ಹಿನ್ನೆಲೆಯಲ್ಲಿ ಸಂಘ ಪರಿವಾರದ ಕಾರ್ಯಕರ್ತನೊಬ್ಬ ತೀವ್ರವಾಗಿ ಹಲ್ಲೆ ನಡೆಸಿದ್ದ ಘಟನೆ ವರದಿಯಾಗಿತ್ತು.

Join Whatsapp
Exit mobile version