ಸಕಲೇಶಪುರ: ಹಳೆ ವೈಷಮ್ಯ; ಯುವಕನ ಕೊಲೆ

Prasthutha|

ಸಕಲೇಶಪುರ: ಗೋ ಮಾಂಸದ ರಕ್ತವನ್ನು ಮನೆ ಮುಂದೆ ಹರಿಸುವ ವಿಚಾರಕ್ಕೆ ಸಕಲೇಶಪುರದಲ್ಲಿ ಆರಂಭವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.

- Advertisement -

ಸಕಲೇಶಪುರದ ಅಪ್ಸರ್ ಪಾಷಾ (32) ಕೊಲೆಯಾದ  ವ್ಯಕ್ತಿ. ಗೋಮಾಂಸ ಮಾರಾಟ ಮತ್ತು ಅದರ ಮಾಂಸದ ತ್ಯಾಜ್ಯವನ್ನು ಮನೆಯ ಮುಂದೆ ಹರಿಸದಂತೆ ಹೇಳಿದ್ದಕ್ಕೆ ರೊಚ್ಚಿಗೆದ್ದ ಮಾಂಸದಂಡಿಯ ಮಾಲೀಕನ ಮಕ್ಕಳು ನಡುಬೀದಿಯಲ್ಲಿಯೇ ಅಪ್ಸರ್ ಪಾಷಾ ಅವರನ್ನು ಚೂರಿಯಿಂದ ಇರಿದು ಕೊಲೆ ಮಾಡಿದ್ದಾರೆ.

ಸಕಲೇಶಪುರದಲ್ಲಿ ಗೋ ಮಾಂಸ ಮಾರಾಟ ಮಾಡುತ್ತಿದ್ದ ಹಾಜಿ ಖುರೇಷಿ ಕುಟುಂಬದವರು ಹಸುಗಳ ಮಾಂಸ ಸ್ವಚ್ಛ ಮಾಡಿದ ನೀರನ್ನು ಚರಂಡಿಯಲ್ಲಿ ಹರಿಯ ಬಿಡುತ್ತಿದ್ದರು. ಇದು ಅಪ್ಸರ್ ಮನೆಯ ಮುಂದೆ ನಿಲ್ಲುತ್ತಿದ್ದ ಕಾರಣ ವಿಪರೀತ ದುರ್ವಾಸನೆ ಬೀರುತ್ತಿತ್ತು. ಇದೇ ವಿಚಾರವಾಗಿ ಕಳೆದ ಕೆಲವು ತಿಂಗಳುಗಳ ಹಿಂದೆ ಅಪ್ಸರ್ ಹಾಗೂ ಹಾಜಿ ಖುರೇಷಿ ಕುಟುಂಬಗಳ ನಡುವೆ ಸಣ್ಣಪುಟ್ಟ ಜಗಳವಾಗಿದ್ದವು.

- Advertisement -

 ಅಪ್ಸರ್ ಸಹೋದರ ಇಮ್ರಾನ್ ಎಂಬಾತನ ಮೇಲೆ ನಿನ್ನೆ ಹಾಜಿ ಖುರೇಷಿ ಮತ್ತವರ ಗ್ಯಾಂಗ್ ಹಲ್ಲೆ ನಡೆಸಿತ್ತು. ಈ ವಿಚಾರ ತಿಳಿದ ಅಪ್ಸರ್, ಹಾಜಿ ಖುರೇಷಿ ಗ್ಯಾಂಗಿನ ಜೊತೆ ಜಗಳವಾಡಿದ್ದಾರೆ. ಈ ವೇಳೆ, ಏಕಾಏಕಿ ಗ್ಯಾಂಗ್ ಅಪ್ಸರ್ ಮೇಲೆ ಹಲ್ಲೆ ನಡೆಸಿದೆ. ಹಾಜಿ ಖುರೇಷಿ ಗ್ಯಾಂಗಿನ ಏಸಾನ್ ಖುರೇಷಿ ಎಂಬಾತ ಚೂರಿಯಿಂದ ಅಪ್ಸರ್ ಪಾಷಾ ಹೊಟ್ಟೆಗೆ ಇರಿದು ಪರಾರಿಯಾಗಿದ್ದಾನೆ.

ತಕ್ಷಣ ಗಾಯಗೊಂಡ ಅಪ್ಸರ್ ಅವರನ್ನು ಕ್ರಾಪರ್ಡ್ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ಕರೆದೊಯ್ದರಾದರೂ ಮಾರ್ಗ ಮಧ್ಯೆದಲ್ಲಿ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಎಎಸ್ಪಿ ನಂದಿನಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಿಸಿಟಿವಿಯಲ್ಲಿ ದೃಶ್ಯಾವಳಿಗಳ ಆಧಾರವಾಗಿಟ್ಟುಕೊಂಡು ಪ್ರಮುಖ ಆರೋಪಿ ಏಷಾನ್ ಖುರೇಷಿಯನ್ನು ವಶಕ್ಕೆ ಪಡೆದು ಉಳಿದ ನಾಲ್ವರಿಗೆ ಬಲೆ ಬೀಸಿದ್ದಾರೆ. ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp
Exit mobile version