Home ಟಾಪ್ ಸುದ್ದಿಗಳು ಉಪ್ಪಿನಂಗಡಿ: ಮಹಿಳೆಯ ಕೊಲೆ ಪ್ರಕರಣ; ಬಾಲಕನ ಬಂಧನ

ಉಪ್ಪಿನಂಗಡಿ: ಮಹಿಳೆಯ ಕೊಲೆ ಪ್ರಕರಣ; ಬಾಲಕನ ಬಂಧನ


ಉಪ್ಪಿನಂಗಡಿ: ರವಿವಾರ ಮೃತಪಟ್ಟ ಹೇಮಾವತಿ (37) ಪ್ರಕರಣವನ್ನು ಕೊಲೆ ಎಂದು ತೀರ್ಮಾನಿಸಿರುವ ಪೊಲೀಸರು, ಈ ಸಂಬಂಧ ಅಪ್ರಾಪ್ತ ವಯಸ್ಕನನ್ನು ಬಂಧಿಸಿದ್ದಾರೆ.

ಹೇಮಾವತಿ ಅವರ ಮನೆಯಲ್ಲಿ ರಾತ್ರಿ ತಂಗಿದ್ದ ಅಕ್ಕನ ಮಗ, 10ನೇ ತರಗತಿ ವಿದ್ಯಾರ್ಥಿಯೇ ಆರೋಪಿ. ಬಾಲಕನು ಚಿಕ್ಕಮ್ಮನ ಜತೆ ಅನುಚಿತವಾಗಿ ವರ್ತಿಸಿದ್ದು, ಆಗ ಪ್ರತಿರೋಧ ಒಡ್ಡಿದ ಕಾರಣ ಹೇಮಾವತಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸ್‌ ತನಿಖೆ ವೇಳೆ ತಿಳಿದುಬಂದಿದೆ.

Join Whatsapp
Exit mobile version