‘ಮೊಘಲ್ ಮ್ಯೂಸಿಯಂ’ಗೆ ‘ಶಿವಾಜಿ ಮ್ಯೂಸಿಯಂ’ ಹೆಸರು!

Prasthutha|

➤ ಮುಂದುವರಿದ ಯೋಗಿಯ ಮೊಘಲ್ ದ್ವೇಷ

- Advertisement -

ಲಖನೌ : “ಮೊಘಲರು ನಮ್ಮ ಹೀರೋಗಳು ಹೇಗಾಗುತ್ತಾರೆ?’’ ಎಂದು ಪ್ರಶ್ನಿಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆಗ್ರಾದ ‘ಮೊಘಲ್ ಮ್ಯೂಸಿಯಂ’ ಹೆಸರನ್ನು ‘ಛತ್ರಪತಿ ಶಿವಾಜಿ ಮಹಾರಾಜ್’ ಎಂದು ಬದಲಾಯಿಸಲು ನಿರ್ಧರಿಸಿದ್ದಾರೆ. ಆಗ್ರಾ ವಲಯದ ಕಾಮಗಾರಿಗಳ ಪರಿಶೀಲನಾ ಸಭೆಯಲ್ಲಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.

ಮೊಘಲ್ ಮ್ಯೂಸಿಯಂಗೆ 2016ರಲ್ಲಿ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಶಂಕು ಸ್ಥಾಪನೆ ಮಾಡಿದ್ದರು. ಆಗ್ರಾ ಹೆರಿಟೇಜ್ ಸೆಂಟರ್, ತಾಜ್ ಓರಿಯಂಟೇಶನ್ ಸೆಂಟರ್ ಸೇರಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಅವರು ಚಾಲನೆ ನೀಡಿದ್ದರು.
ತಾಜ್ ಮಹಲ್ ನ ಪೂರ್ವ ಗೇಟ್ ಬಳಿ ಆರು ಎಕರೆಯಲ್ಲಿ ಮ್ಯೂಸಿಯಂ ನಿರ್ಮಾಣದ ಪ್ರಸ್ತಾಪವಿತ್ತು. ಪ್ರವಾಸಿಗರಿಗೆ ಮೊಘಲರ ಕಾಲದ ಶಸ್ತ್ರಾಸ್ತ್ರಗಳು, ಸಾಂಸ್ಕೃತಿಕ ಪರಿಕರಗಳು ಮತ್ತು ವಸ್ತ್ರಗಳು ಸೇರಿದಂತೆ ಹಲವು ಪಾರಂಪರಿಕ ವಸ್ತುಗಳನ್ನು ಪ್ರದರ್ಶಿಸುವುದು ಮ್ಯೂಸಿಯಂ ಸ್ಥಾಪನೆಯ ಉದ್ದೇಶವಾಗಿತ್ತು.

- Advertisement -

ಮ್ಯೂಸಿಯಂ ಸ್ಥಾಪನೆಯ ಉದ್ದೇಶ ಹೀಗಿರುವಾಗ, ಹೆಸರು ಬದಲಾವಣೆಯಿಂದ ಅದರ ಮೇಲೆ ಯಾವ ಪರಿಣಾಮ ಉಂಟಾಗಬಹುದು ಎಂಬುದರ ಬಗ್ಗೆ ಹೆಚ್ಚು ಮಾಹಿತಿಯಿಲ್ಲ. ಹೆಸರು ಬದಲಾವಣೆಯ ಜೊತೆಗೆ ಬಹುಶಃ ಮ್ಯೂಸಿಯಂನ ಉದ್ದೇಶವೂ ಬದಲಾವಣೆಯಾಗಬಹುದು ಎನ್ನಲಾಗುತ್ತಿದೆ.

Join Whatsapp