ಡಾ.ಎಂಸಿ ಸುಧಾಕರ್‌ ವಿರುದ್ಧ ಡಾ.ಕೆ ಸುಧಾಕರ್ ವಾಗ್ದಾಳಿ

Prasthutha|

ಚಿಕ್ಕಬಳ್ಳಾಪುರ : ನಾನು ಕೊಟ್ಟಿರುವ ನಿವೇಶನಗಳಿಗೆ ನಿಮ್ಮ ಫೋಟೋ ಹಾಕಿಕೊಂಡಿದ್ದೀರಿ. ಗಂಡಸರಾಗಿದ್ದರೆ ಜಿಲ್ಲೆಯ ಪ್ರತಿ ಕ್ಷೇತ್ರದಲ್ಲಿ 25,000 ಸೈಟ್ ಕೊಡಿಸಿ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂಸಿ ಸುಧಾಕರ್‌ಗೆ ಸಂಸದ ಡಾ.ಕೆ ಸುಧಾಕರ್ ಹೇಳಿದ್ದಾರೆ.

- Advertisement -

ಚಿಕ್ಕಬಳ್ಳಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಮುಲ್ ರದ್ದು ಮಾಡಿ ಮತ್ತೆ ಕೋಚಿಮುಲ್‌ಗೆ ಸೇರಿಸಿದ್ದೀರಿ. ಬಜೆಟ್ ಮೀಟಿಂಗ್‌ನಲ್ಲಿ ಸಚಿವ ಡಾ. ಎಂ ಸಿ ಸುಧಾಕರ್ ಇದ್ದರು. ಚಿಕ್ಕಬಳ್ಳಾಪುರ ಜಿಲ್ಲೆಗೆ ಅನ್ಯಾಯವಾಗುತ್ತಿದ್ದರು ಕೂಡ ಯಾಕೆ ಸಭೆಯಲ್ಲಿ ಮಾತನಾಡಲಿಲ್ಲ ಎಂದರು.

ನಿಮಗೆ ಯಾಕೆ ಚಿಕ್ಕಬಳ್ಳಾಪುರ ಜಿಲ್ಲೆ ಬೇಕು ಹೇಳಿ? ನಾನೇನಾದರೂ ನಿಮ್ಮ ಸ್ಥಾನದಲ್ಲಿದ್ದರೆ ರಾಜೀನಾಮೆ ಬಿಸಾಕಿ ಬರುತ್ತಿದ್ದೆ. ಒಂದು ದಿನ ಬದುಕಿದ್ದರೂ ಸಿಂಹದಂತೆ ಬದುಕಬೇಕು.ಅಧಿಕಾರಕ್ಕೆ ಅಂಟಿಕೊಂಡು ಇದೀರಲ್ಲ ನಿಮಗೆ ನಾಚಿಕೆ ಆಗಲ್ವಾ? ಎಂದು ಸಚಿವ ಸಂಸದ ಡಾ. ಕೆ ಸುಧಾಕರ್ ವಾಗ್ದಾಳಿ ನಡೆಸಿದ್ದಾರೆ.

Join Whatsapp
Exit mobile version