ಸಜೀಪ ಮುನ್ನೂರು ಗ್ರಾಮ ಪಂಚಾಯತ್ ನ ನೀರಿನ ಸ್ಥಾವರದ ಮೋಟರ್ ಕೇಬಲ್ ಕಳ್ಳತನ | ಪೊಲೀಸ್ ದೂರು ದಾಖಲಿಸಿದ ಪಂಚಾಯತ್ ಅಧಿಕಾರಿ

Prasthutha|

ಸಜೀಪ ಮುನ್ನೂರು ಗ್ರಾಮ ಪಂಚಾಯತಿನ 3ನೇ ವಾರ್ಡ್ ನ ನೀರು ಸರಬರಾಜು ಮಾಡುವ ಸ್ಥಾವರದ ಕೇಬಲನ್ನು ಕಿಡಿಗೇಡಿಗಳು ಕಳ್ಳತನ ಮಾಡಿದ್ದಾರೆ. ಈ ಕುರಿತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಬಂಟ್ವಾಳ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

- Advertisement -

ಈಗಾಗಲೇ ಸಮಯಕ್ಕೆ ಸರಿಯಾಗಿ ನೀರು ಸಿಗದ ಸಮಸ್ಯೆಗೆ ಸಿಲುಕಿರುವ ಈ ಭಾಗದ ಜನರಿಗೆ ಈ ಘಟನೆಯಿಂದಾಗಿ ನೀರಿನ ಸರಬರಾಜು ಸ್ಥಗಿತಗೊಂಡು ಮತ್ತಷ್ಟು ಸಂಕಷ್ಟ ಎದುರಾಗಿದೆ. ಇದಲ್ಲದೆ ನೀರಿನ ಸ್ಥಾವರದ ಸುತ್ತ ಮುತ್ತ ಮಲವಿಸರ್ಜನೆ ಮಾಡಿ ವಿಕೃತ ಮೆರೆಯುತ್ತಿದ್ದಾರೆ ಎಂದು ಕೂಡಾ ಪಂಚಾಯತ್ ಅಧಿಕಾರಿಗಳು ತಿಳಿಸಿದ್ದಾರೆ.

ಇದರ ವಿರುದ್ಧ ಸೂಕ್ತ ರೀತಿಯ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಬಂಟ್ವಾಳ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಿವಗುಂಡಪ್ಪ ಬಿರುದಾರ ಹಾಗೂ ಪಂಚಾಯತ್ ಸದಸ್ಯರಾದ ಶಮೀರ್ ಬೀಡಿ ಬ್ರಾಂಚ್, ಸಿದ್ಧೀಕ್ ಅರಫಾ ಮತ್ತು ಜಮಾಲ್ ರೋಯಲ್ ಉಪಸ್ಥಿತರಿದ್ದರು..

Join Whatsapp