Home ಟಾಪ್ ಸುದ್ದಿಗಳು ಮೊಹ್ಸಿನ್ ಶೇಖ್ ಹತ್ಯೆ ಪ್ರಕರಣ: ಸಂಘಪರಿವಾರದ 20 ಆರೋಪಿಗಳು ಖುಲಾಸೆ

ಮೊಹ್ಸಿನ್ ಶೇಖ್ ಹತ್ಯೆ ಪ್ರಕರಣ: ಸಂಘಪರಿವಾರದ 20 ಆರೋಪಿಗಳು ಖುಲಾಸೆ

ಪುಣೆ: ಐಟಿ ಉದ್ಯೋಗಿಯಾಗಿದ್ದ ಮೊಹ್ಸಿನ್ ಶೇಖ್ ಅವರನ್ನು ಸಂಘಪರಿವಾರದ ಕಾರ್ಯಕರ್ತರು ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಬತ್ತು ವರ್ಷಗಳ ನಂತರ ಪುಣೆ ಸೆಷನ್ಸ್ ನ್ಯಾಯಾಲಯವು ತೀರ್ಪು ನೀಡಿದ್ದು, ಹಿಂದೂ ರಾಷ್ಟ್ರ ಸೇನೆ (ಎಚ್ ಆರ್ ಎಸ್) ಅಧ್ಯಕ್ಷ ಧನಂಜಯ ದೇಸಾಯಿ ಸೇರಿದಂತೆ ಎಲ್ಲಾ 20 ಆರೋಪಿಗಳನ್ನು ಶುಕ್ರವಾರ ಬಿಡುಗಡೆ ಮಾಡಿದೆ.


ಶುಕ್ರವಾರ ತೀರ್ಪನ್ನು ಪ್ರಕಟಿಸಿದ ಪುಣೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಎಸ್.ಬಿ.ಸಾಲುಂಖೆ, ದೇಸಾಯಿ ಮತ್ತು ಇತರ ಸಹ ಆರೋಪಿಗಳನ್ನು ದೋಷಿ ಎಂದು ಸಾಬೀತುಪಡಿಸಲು ದಾಖಲೆಗಳು ಸಾಕಷ್ಟು ಪ್ರಬಲವಾಗಿಲ್ಲ ಮತ್ತು ಪ್ರಾಸಿಕ್ಯೂಷನ್ ತನ್ನ ಪ್ರಕರಣವನ್ನು ಸಮಂಜಸವಾದ ಅನುಮಾನಗಳನ್ನು ಮೀರಿ ಸಾಬೀತುಪಡಿಸಲು ವಿಫಲವಾಗಿದೆ ಎಂದು ಹೇಳಿದರು.


ಜೂನ್ 2014 ರಲ್ಲಿ, ಸೋಲಾಪುರ ಮೂಲದ ಶೇಖ್ ತನ್ನ ಸ್ನೇಹಿತ ರಿಯಾಝ್ ಅವರೊಂದಿಗೆ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ನಂತರ ಮನೆಗೆ ಹಿಂದಿರುಗುತ್ತಿದ್ದಾಗ ಸಂಘಪರಿವಾರದ ಕಾರ್ಯಕರ್ತರು ಕ್ರಿಕೆಟ್ ಬ್ಯಾಟ್, ಕಲ್ಲುಗಳು ಮತ್ತು ಇತರ ಆಯುಧಗಳಿಂದ ಮೊಹ್ಸಿನ್ ಶೇಖ್ ಮೇಲೆ ಹಲ್ಲೆ ನಡೆಸಿದ್ದರು.
ಹೊಡೆತದಿಂದ ತೀವ್ರವಾಗಿ ಗಾಯಗೊಂಡ ಶೇಖ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನಿಧನರಾಗಿದ್ದರು.
ಪ್ರಕರಣ ಸಂಬಂಧ ಒಟ್ಟು 21 ಜನ ಸಂಘಪರಿವಾರದ ಕಾರ್ಯಕರ್ತರನ್ನು ಬಂಧಿಸಲಾಗಿತ್ತು.

Join Whatsapp
Exit mobile version