Home ಟಾಪ್ ಸುದ್ದಿಗಳು ಲೋಕಸಭೆ ಚುನಾವಣೆ ಬಳಿಕ ಮೋದಿ ಮನಸ್ಥಿತಿ ಬದಲಾಗಿದೆ: ರಾಹುಲ್‌ ಗಾಂಧಿ

ಲೋಕಸಭೆ ಚುನಾವಣೆ ಬಳಿಕ ಮೋದಿ ಮನಸ್ಥಿತಿ ಬದಲಾಗಿದೆ: ರಾಹುಲ್‌ ಗಾಂಧಿ

ಶ್ರೀನಗರ: ಲೋಕಸಭಾ ಚುನಾವಣೆಗೆ ಮುನ್ನ ನೀವು ಮೋದಿಯವರ 56 ಇಂಚಿನ ಎದೆಯ ಬಗ್ಗೆ ಕೇಳಿರಬೇಕು. ಆದರೆ ನೀವು ಅವರನ್ನು ಇದೀಗ ಗಮನಿಸಿದ್ದೀರಾ? ಮನಸ್ಥಿತಿ ಬದಲಾಗಿದೆ. ಐಎನ್‌ಡಿಐಎ ಮೈತ್ರಿಕೂಟ ಮತ್ತು ಕಾಂಗ್ರೆಸ್ ಮೋದಿಯವರ ಮನೋವಿಜ್ಞಾನವನ್ನು ಬದಲಾಯಿಸಿವೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ಶ್ರೀನಗರದ ಚುನಾವಣಾ ಭಾಷಣದಲ್ಲಿ ಮಾತನಾಡಿದ ಅವರು, ಮೋದಿ ಕೇವಲ ಅವರ ಮನ್‌ ಕಿ ಬಾತ್‌ ಬಗ್ಗೆ ಮಾತನಾಡುತ್ತಾರೆ. ಉದ್ಯೋಗ ಅವಕಾಶಗಳು, ಬೆಲೆ ಏರಿಕೆ ನಿಯಂತ್ರಣದ ಸೇರಿದಂತೆ ಕೆಲಸ ವಿಚಾರವನ್ನು ಅವರು ಮಾತನಾಡುವುದೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಇತ್ತೀಚಿನ ದಿನಗಳಲ್ಲಿ, ಪ್ರಧಾನಿ ಮೋದಿಯವರ ಮುಖವು ಬದಲಾಗಿದೆ, ಅವರ ಮನಸ್ಥಿತಿ ಬದಲಾಗಿದೆ. ಇದಕ್ಕೆ ಐಎನ್‌ಡಿಐಎ ಮೈತ್ರಿ, ಕಾಂಗ್ರೆಸ್ ಪಕ್ಷ ಮತ್ತು ಈ ದೇಶದ ಜನರು ಕಾರಣ ಎಂದು ಹೇಳಿದರು.

Join Whatsapp
Exit mobile version