ಮೋದಿ ಒಬ್ಬ ಗೋಮುಖ ವ್ಯಾಘ್ರ : ಸಿದ್ದರಾಮಯ್ಯ

Prasthutha|

- Advertisement -

ಮಂಗಳೂರು : ಪ್ರಧಾನಿ ಮೋದಿ ಒಬ್ಬ ಗೋ ಮುಖ ವ್ಯಾಘ್ರ ಎಂದು ಮಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದ್ದಾರೆ.

ಭಾವೈಕ್ಯ ಸಮಾವೇಶದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಆರ್ ಎಸ್ ಎಸ್ ಹೇಳಿದಂತೆ ಈ ದೇಶವನ್ನು ಹಿಂದೂ ರಾಷ್ಟ್ರ ಮಾಡಲು ಸಾಧ್ಯವಿಲ್ಲ, ಆ ರೀತಿ ಮಾಡಲು ನಮ್ಮ ಸಂವಿಧಾನದಲ್ಲಿ ಅವಕಾಶವಿಲ್ಲ, ಆರ್ ಎಸ್ ಎಸ್ ಎನ್ನುವುದು ಒಂದು ಜಾತಿಯ ಸಂಘಟನೆ, ಅವರು ದೇಶಭಕ್ತರಾಗಿದ್ರೆ ಸ್ವಾತಂತ್ರ ಹೋರಾಟದಲ್ಲಿ ಅವರ ಕೊಡುಗೆ ಏನಿದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

- Advertisement -

“ಅನಂತ್ ಕುಮಾರ್ ಹೆಗಡೆ ಗ್ರಾಮ ಪಂಚಾಯತ್ ಸದಸ್ಯನಾಗುವುದ್ಕೂ ನಾಲಾಯಕ್, ಅವನು ಸಂವಿಧಾನವನ್ನೇ ಬದಲಿಸಲು ಹೊರಟಿದ್ದಾನೆ. ನರೇಂದ್ರ ಮೋದಿ ಒಬ್ಬ ಗೋಮುಖ ವ್ಯಾಘ್ರ ಎಂದು ಅವರು ಕಿಡಿಕಾರಿದ್ದಾರೆ. ಗೋಹತ್ಯೆ ನಿಷೇಧ ಕಾನೂನು ತಂದಿರುವುದು ಸರಿಯಲ್ಲ, ಬೀಫ್ ತಿನ್ನುವುದನ್ನು ಬೇಡ ಎನ್ನಲು ಇವರು ಯಾರು? ನನಗೆ ತಿನ್ನಬೇಕು ಎನ್ನಿಸಿದ್ರೆ ತಿನ್ನುತ್ತೇನೆ. ಕೇಳಲು ಇವರು ಯಾರು ಎಂದು ಅವರು ವಾಗ್ಧಾಳಿ ನಡೆಸಿದ್ದಾರೆ.

Join Whatsapp