Home ಟಾಪ್ ಸುದ್ದಿಗಳು ರಂಝಾನ್ ಹಿನ್ನೆಲೆ: ಹುಬ್ಬಳ್ಳಿ ಗಲಭೆಯ ಬಂಧಿತರ ಕುಟುಂಬಸ್ಥರಿಗೆ ಶಾಸಕ ಝಮೀರ್ ಸಹಾಯ

ರಂಝಾನ್ ಹಿನ್ನೆಲೆ: ಹುಬ್ಬಳ್ಳಿ ಗಲಭೆಯ ಬಂಧಿತರ ಕುಟುಂಬಸ್ಥರಿಗೆ ಶಾಸಕ ಝಮೀರ್ ಸಹಾಯ

ಹುಬ್ಬಳ್ಳಿ: ವಾಟ್ಸಾಪ್ ವಿಚಾರವಾಗಿ ನಡೆದಿದ್ದ ವಿವಾದ ಹುಬ್ಬಳ್ಳಿಯಲ್ಲಿ ಗಲಭೆಗೆ ಕಾರಣವಾಗಿತ್ತು. ಬಳಿಕ ಪೊಲೀಸರು ಹಳೆ ಹುಬ್ಬಳ್ಳಿಯ 150ಕ್ಕಿಂತಲೂ ಹೆಚ್ಚು ಜನರನ್ನು ಬಂಧಿಸಿದ್ದರು. ಪೊಲೀಸರು ಹಲವು ಅಮಾಯಕರನ್ನು ಗಲಭೆಯ ರೂವಾರಿಗಳೆಂದು ಚಿತ್ರಿಸಿ ಬಂಧಿಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು.

ಇದೀಗ ಪ್ರಕರಣದಲ್ಲಿ ಬಂಧಿತರಾದವರ ಕುಟುಂಬಸ್ಥರಿಗೆ ರಂಝಾನ್ ಹಬ್ಬದ ಹಿನ್ನೆಲೆಯಲ್ಲಿ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಸಹಾಯ ಹಸ್ತ ನೀಡಲು ಮುಂದಾಗಿದ್ದಾರೆ. ಪ್ರತಿ ಕುಟುಂಬಕ್ಕೂ ಆಹಾರ ಕಿಟ್ ಹಾಗೂ 5 ಸಾವಿರ ಧನ ಸಹಾಯ ಮಾಡಲಿದ್ದಾರೆ. ಮನೆಯಲ್ಲಿ ದುಡಿಯುವ ಗಂಡಸರು ಇಲ್ಲದ ಹಿನ್ನಲೆಯಲ್ಲಿ ಪವಿತ್ರ ರಂಜಾನ್ ಹಬ್ಬ ಆಚರಣೆಗೆ ಕಷ್ಟ ಆಗಬಾರದು, ಕುಟುಂಬದಲ್ಲಿ ದುಃಖವಿರಬಾರದು ಎಂದು ತಾಯಂದಿರಿಗೆ, ಹೆಣ್ಣುಮಕ್ಕಳಿಗೆ, ಪುಟ್ಟ ಮಕ್ಕಳಿಗೆ ಸಹಾಯ ಮಾಡುತ್ತಿದ್ದೇವೆ ಎಂದು ಜಮೀರ್ ಹೇಳಿದ್ದಾರೆ.

ಈ ಸಹಾಯ ಪುಟ್ಟ ಮಕ್ಕಳು ವರ್ಷಕ್ಕೊಮ್ಮೆ ಬರುವ ಪವಿತ್ರ ರಂಝಾನ್ ಹಬ್ಬವನ್ನು ಆಚರಣೆ ಮಾಡಲಿ ಎಂದಷ್ಟೆ. ಇಂದು ಸಂಜೆ ನಾಲ್ಕು ಗಂಟೆಗೆ ಮಸ್ತಾನ ಶಾದಿ ಮಹಲ್’ನಲ್ಲಿ ಆಹಾರ ಕಿಟ್ ಹಾಗೂ ಸಹಾಯಧನ ವಿತರಣೆಯನ್ನು ಝಮೀರ್ ಮಾಡಲಿದ್ದಾರೆ.

Join Whatsapp
Exit mobile version