”ಈಶ್ವರಪ್ಪ ಓರ್ವ ಡೋಂಗಿ ರಾಮ ಭಕ್ತ” : ಶಾಸಕ ಸಂಗಮೇಶ್ ವಾಗ್ದಾಳಿ

Prasthutha|

ಶಿವಮೊಗ್ಗ: ಈಶ್ವರಪ್ಪ ಓರ್ವ ಡೋಂಗಿ ರಾಮ ಭಕ್ತ. ನಾವು ಭಾರತೀಯರು, ನಮಗೂ ಶ್ರೀರಾಮನು ದೇವರಾಗಿದ್ದಾನೆ, ನಾವು ಶ್ರೀರಾಮನಿಗೆ ಧಿಕ್ಕಾರ ಕೂಗಲಿಲ್ಲ, ಪಾಕಿಸ್ತಾನಕ್ಕೆ ಜಿಂದಾಬಾದ್ ಎಂದಿಲ್ಲ’ ಎಂದು ಶಾಸಕ ಸಂಗಮೇಶ್ ಕಿಡಿಕಾರಿದ್ದಾರೆ.

- Advertisement -

ಪ್ರಚೋದನಕಾರಿ ಹೇಳಿಕೆಗಳ ಮೂಲಕ ಹಿಂದೂಗಳ‌ ಮನಸ್ಸು ಕೆರಳಿಸುವ ಈಶ್ವರಪ್ಪಗೆ ಹುಚ್ಚು ಹಿಡಿದಿದೆ. ಅವರು ನಿಮ್ಹಾನ್ಸ್​ಗೆ ದಾಖಲಾಗಲಿ ಎಂದು ಅವರು ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವ್ರು, ‘ಕೋಮುಲಭೆಗಳನ್ನು ಸೃಷ್ಟಿಸಲು ಈಶ್ವರಪ್ಪ ಇಂತಹಾ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದರೆ ನಮಗೆ ಯಾಕೆ ಖುಷಿ? ಈಶ್ವರಪ್ಪರನ್ನು ಗೆಲ್ಲಿಸುವುದೇ ವೀರಶೈವ ಲಿಂಗಾಯತರು, ನನಗೆ ಕಿರುಕುಳ ನೀಡಿರುವ ಈಶ್ವರಪ್ಪನಿಗೆ ಮುಂದಿನ ಚುನಾವಣೆಯಲ್ಲಿ ಲಿಂಗಾಯತರು ತಕ್ಕ ಪಾಠ ಕಲಿಸಲಿದ್ದಾರೆ.

- Advertisement -

ನಮ್ಮ ವಿರುದ್ದ ಹೂಡಿರುವ ಪ್ರಕರಣಗಳನ್ನ ವಾಪಸ್ ಪಡೆಯಬೇಕು. ಅಲ್ಲಿಯವರೆಗೂ ವಿಧಾನಸಭೆಯಲ್ಲಿ ಧರಣಿ ಮುಂದುವರಿಸುತ್ತೇನೆ. ಇದು ನನ್ನ ಹಕ್ಕು ಎಂದು ಅವರು ಹೇಳಿದ್ದಾರೆ.

Join Whatsapp