Home ಟಾಪ್ ಸುದ್ದಿಗಳು ಕಾಣೆಯಾಗಿದ್ದ ಲಾಯರ್ ಕೊಲೆಯಾದ ಸ್ಥಿತಿಯಲ್ಲಿ ಪತ್ತೆ

ಕಾಣೆಯಾಗಿದ್ದ ಲಾಯರ್ ಕೊಲೆಯಾದ ಸ್ಥಿತಿಯಲ್ಲಿ ಪತ್ತೆ

ಬೀಳಗಿ: ಕಾಣೆಯಾಗಿದ್ದ ವಕೀಲರೊಬ್ಬರು ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಘಟನೆ ಬೀಳಗಿ ತಾಲೂಕಿನ ತುಮ್ಮರಮಟ್ಟಿ ಗ್ರಾಮದಲ್ಲಿ ನಡೆದಿದೆ. ಕಾಣೆಯಾಗಿ ಕೊಲೆಯಾದ ವ್ಯಕ್ತಿಯನ್ನು ವಕೀಲ ಗಿರೀಶ್ ಕಾಡಣ್ಣವರ(38) ಎಂದು ಗುರುತಿಸಲಾಗಿದೆ. ಶವ ಕೊಳೆತ‌ ಸ್ಥಿತಿಯಲ್ಲಿ ಗ್ರಾಮದ ವಾರಿ ಮಲ್ಲಯ್ಯನ‌ ಗುಡಿ ಬೆಟ್ಟದ ಮೇಲೆ ಪತ್ತೆಯಾಗಿದೆ.

ಗಿರೀಶ್ ದೇಹವನ್ನು ನೋಡಿದಾಗ  ಕಲ್ಲಿನಿಂದ‌‌‌ ತಲೆ ಮತ್ತು ದೇಹವನ್ನು ಜಜ್ಜಿ‌ ಕೊಲೆ‌ ಮಾಡಿರುವ ಶಂಕೆ ವ್ಯಕ್ತವಾಗಿದೆ. ಗಿರೀಶ್ ಬೀಳಗಿ ತಾಲೂಕು ನ್ಯಾಯಾಲಯದಲ್ಲಿ ವಕೀಲಿ ವೃತ್ತಿ‌ ಮಾಡುತ್ತಿದ್ದು, ಅಕ್ಟೋಬರ್ 15 ರಿಂದ ಮನೆಯಿಂದ‌ ಕಾಣೆಯಾಗಿದ್ದರು.

ಘಟನೆಗೆ ಕಾರಣ ಏನೆಂದು ಇನ್ನಷ್ಟೇ ತಿಳಿದುಬರಬೇಕಾಗಿದೆ. ಘಟನಾ ಸ್ಥಳಕ್ಕೆ ‌ಬೀಳಗಿ ಠಾಣೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.

Join Whatsapp
Exit mobile version