ಸಚಿವ ಈಶ್ವರಪ್ಪನವರ ಬಳಿ ನೋಟ್ ಪ್ರಿಂಟ್ ಮಾಡುವ ಮೆಷಿನ್ ಇಲ್ಲದಿದ್ದರೂ ನೋಟ್ ಎಣಿಸುವ ಮೆಷಿನ್ ಇದೆ : ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್. ಪಿ. ಗಿರೀಶ್

Prasthutha|

ರಾಜ್ಯ ಸರಕಾರ ವಜಾಕ್ಕೆ ಆಗ್ರಹ

- Advertisement -

ಸಚಿವರಾದ ಕೆಎಸ್ ಈಶ್ವರಪ್ಪನವರು ನಿನ್ನೆ ದಿನ ಕೊಟ್ಟಂತಹ ಹೇಳಿಕೆಯು ಬಾಲಿಶ ಹೇಳಿಕೆ ಆಗಿದ್ದು ಈಶ್ವರಪ್ಪ ರವರು ಹೇಳಿದ್ದು ಸತ್ಯ ಇವರ ಬಳಿ ನೋಟ್ ಪ್ರಿಂಟ್ ಮಾಡುವ ಮೆಷಿನ್ ಇಲ್ಲ ಆದರೆ ಪ್ರಿಂಟಾದ ನೋಟ್ ಗಳನ್ನು ಎಣಿಸುವ ಮಿಷನನ್ನು ತಮ್ಮ ಮನೆಯಲ್ಲಿ ಇಟ್ಟು ಕೊಂಡಿದ್ದಾರೆ

ರಾಜ್ಯದ ಜನ ಹಾಗೂ ವಿರೋಧಪಕ್ಷಗಳು ಸಂವಿಧಾನವಾಗಿ ತಾವು ಕಟ್ಟಿದಂತಹ ತೆರಿಗೆ ಹಣವನ್ನು ಪರಿಹಾರ ಕೇಳುವುದು ತಪ್ಪೇ  ಈಗಾಗಲೇ ದೇಶದಲ್ಲಿ ರಾಷ್ಟ್ರೀಯ ವಿಪತ್ತು ಪರಿಸ್ಥಿತಿ ಉಂಟಾಗಿದ್ದು ಸರ್ಕಾರದ ಸಚಿವರು, ಶಾಸಕರುಗಳು ಸಂಸದರು ಗಳು ಬಾಲಿಶತನದ ಹೇಳಿಕೆಗಳನ್ನು ನೀಡುತ್ತಾ ಅವೈಜ್ಞಾನಿಕ ನಿಯಮದಂತೆ ಲಾಕ್ ಡೌನ್ ಮಾಡುತ್ತಾ ಶ್ರೀಸಾಮಾನ್ಯನ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ

- Advertisement -

ಕರ್ನಾಟಕದ ಬಿಜೆಪಿ ಸಂಸದರು ರಾಜ್ಯಕ್ಕೆ ಬರಬೇಕಾ ದಂತಹ ಕೇಂದ್ರ ಸರ್ಕಾರದ ಪರಿಹಾರವನ್ನು ಕೇಳದೆ ತಮ್ಮ ಬಾಯಿಗೆ ಬೀಗ ಜಡಿದು ಲಾಕ್ಡೌನ್ ಮನಸ್ಥಿತಿಯಲ್ಲಿ ಇರುವುದನ್ನು ಕಂಡರೆ ಇದು ಬೀಗ ಜಡಿದ ಲಾಕ್ಡೌನ್ ಬಿಜೆಪಿ ಸರ್ಕಾರ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ.ಕರೋನ ವೈರಸ್ ಗಿಂತ ಈ ಬಿಜೆಪಿ ಎಂಬ ವೈರಸ್ ಸರ್ಕಾರ  ಅತಿ ಹೆಚ್ಚು ಅಪಾಯಕಾರಿಯಾಗಿದೆ ವಿರೋಧಪಕ್ಷವಾಗಿ ರಾಜ್ಯದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್,   ರಾಜ್ಯದ ಜನರ ಹಿತದೃಷ್ಟಿಯಿಂದ   ಸರ್ಕಾರಕ್ಕೆ ಸಲಹೆ ನೀಡಿದರುಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿರುವ ಸಚಿವ ಕೆಎಸ್ ಈಶ್ವರಪ್ಪನವರು ಈ ಹಿಂದೆ  ಧರ್ಮ- ಜಾತಿ , ಹೊಡಿ, ಬಡಿ, ಕಡಿ ಸಂಸ್ಕೃತಿಯ  ಹೇಳಿಕೆಗಳನ್ನು  ನೀಡುತ್ತಾ ಗೆದ್ದು , ಶಾಸಕ – ಮಂತ್ರಿ ಆಗಿರುವುದು ಈಶ್ವರಪ್ಪರಿಗೆ ನೆನಪಿಲ್ಲವೇ,ಇಂದು ವಿರೋಧಪಕ್ಷಗಳು ಮಾಡುತ್ತಿರುವ ಟೀಕೆಗಳಿಗೆ, ಸಲಹೆಗಳಿಗೆ ಸಮರ್ಥವಾಗಿ ಆಡಳಿತ ನಡೆಸುವುದನ್ನು ಬಿಟ್ಟು ಇಂತಹ ಬಾಲಿಶ ಹೇಳಿಕೆ ನೀಡುತ್ತಿರುವುದನ್ನು  ನೋಡಿದರೆ ಇವರು ಅಧಿಕಾರ ನಡೆಸಲು ಅಸಮರ್ಥರು ಕೂಡಲೇ  ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಬಾಯಿಗೆ ಬೀಗ ಹಾಕುವ ಮುಖಾಂತರ ಜೀವನಪರ್ಯಂತ  ಇವರು ಲಾಕ್ಡೌನ್ ಆಗುವುದು ಉತ್ತಮ ಈ ಕೂಡಲೇ ರಾಜ್ಯಪಾಲರು ಮಧ್ಯಪ್ರವೇಶಿಸಿ ಜನವಿರೋಧಿ ಬಿಜೆಪಿ ಸರ್ಕಾರ ವನ್ನು ವಜಾ ಮಾಡಬೇಕು ಎಂದು ಯುವ ಕಾಂಗ್ರೆಸ್ ಶಿವಮೊಗ್ಗ ಜಿಲ್ಲಾಧ್ಯಕ್ಷ ಹೆಚ್. ಪಿ. ಗಿರೀಶ್ ಆಗ್ರಹಿಸಿದ್ದಾರೆ.

Join Whatsapp