ಸಚಿವರಿಂದಲೇ ಕೋವಿಡ್ ರೂಲ್ಸ್ ಬ್ರೇಕ್ | ಕುಟುಂಬ ಸಮೇತ ಈಶ್ವರಪ್ಪ ದೇವಾಲಯಕ್ಕೆ ಭೇಟಿ!

Prasthutha|

ಶಿವಮೊಗ್ಗ : ಸಚಿವ ಕೆ. ಎಸ್ ಈಶ್ವರಪ್ಪ ಅವರು ತಮ್ಮ ಕುಟುಂಬದವರ ಜೊತೆ ದೇವಾಲಯಕ್ಕೆ ಭೇಟಿ ನೀಡಿ ಲಾಕ್ ಡೌನ್ ನಿಯಮಾವಳಿ ಉಲ್ಲಂಘಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ವಿನೋಭಾ ನಗರದದಲ್ಲಿ ನಡೆದಿದೆ.

- Advertisement -

ವಿನೋಭನಗರದ ಗಣಪತಿ ದೇವಾಲಯಕ್ಕೆ ಜೂನ್ 10 ರಂದು ಭೇಟಿ ನೀಡಿದ್ದಾರೆ ಎಂದು ಹೇಳಲಾಗಿದ್ದು, ಸಚಿವರು ದೇವಾಲಯಕ್ಕೆ ಭೇಟಿ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈಶ್ವರಪ್ಪ ಸೇರಿದಂತೆ ಕುಟುಂಬದ 14 ಮಂದಿ ಸದಸ್ಯರು ದೇವಾಲಯಕ್ಕೆ ಭೇಟಿ ನೀಡಿ ಕೊರೊನಾ ನಿಯಮ ಉಲ್ಲಂಘಿಸಿದ್ದಾರೆ. ಅಲ್ಲದೇ ಈ ದೇವಸ್ಥಾನ ಶಿವಮೊಗ್ಗದ ಶುಭ ಮಂಗಳ ಸಮುದಾಯ ಭವನದ ಒಳಾಂಗಣದಲ್ಲಿದ್ದು, ವಾರಗಳ ಹಿಂದೆಯಷ್ಟೇ ಈ ಸಮುದಾಯ ಭವನವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಬದಲಾವಣೆ ಮಾಡಲಾಗಿತ್ತು, ಸರ್ಕಾರದ ಮಾರ್ಗಸೂಚಿ ಪ್ರಕಾರ ದೇವಾಲಯದಲ್ಲಿ ಪೂಜೆ ಮಾಡುವ ಅರ್ಚಕರಿಗೆ ಮಾತ್ರ ಸದ್ಯ ದೇವಾಲಯ ಪ್ರವೇಶಕ್ಕೆ ಅವಕಾಶವಿದೆ, ಸಚಿವ ಕೆ. ಎಸ್ ಈಶ್ವರಪ್ಪ ಅವರು ತಮ್ಮ ಕುಟುಂಬದವರ ಜೊತೆ ದೇವಾಲಯಕ್ಕೆ ಭೇಟಿ ನೀಡಿ ಲಾಕ್ ಡೌನ್ ನಿಯಮಾವಳಿ ಮುರಿದಿದ್ದಾರೆ.

Join Whatsapp