Home ಟಾಪ್ ಸುದ್ದಿಗಳು ವೈದ್ಯರ ನಿರ್ಲಕ್ಷ್ಯ | ತಾಯಿ, ನವಜಾತ ಶಿಶು ಸಾವು: ಮೂವರು ವೈದ್ಯರ ಬಂಧನ

ವೈದ್ಯರ ನಿರ್ಲಕ್ಷ್ಯ | ತಾಯಿ, ನವಜಾತ ಶಿಶು ಸಾವು: ಮೂವರು ವೈದ್ಯರ ಬಂಧನ

ಪಾಲಕ್ಕಾಡ್:  ಹೆರಿಗೆ ವೇಳೆ ವೈದ್ಯಕೀಯ ನಿರ್ಲಕ್ಷ್ಯದಿಂದ ತಾಯಿ, ನವಜಾತ ಶಿಶು ಮೃತಪಟ್ಟ ಪರಿಣಾಮ ಪಾಲಕ್ಕಾಡ್ ನ ಪಿಎಂಆರ್ ಸಿಯ ತಂಗಂ ಆಸ್ಪತ್ರೆಯ ಮೂವರು ವೈದ್ಯರನ್ನು ಪೊಲೀಸರು ಬಂಧಿಸಿದ್ದಾರೆ.

ಮೃತರನ್ನು ಚಿತ್ತೂರು ತಥಾಮಂಗಲಂ ನಿವಾಸಿ ರಂಜಿತ್ ಎಂಬವರ ಪತ್ನಿ ಐಶ್ವರ್ಯಾ ಮತ್ತು ಆಕೆಯ ನವಜಾತ ಶಿಶು ಎಂದು ಗುರುತಿಸಲಾಗಿದ್ದು, ಅಜಿತ್, ನೀಲಾ ಮತ್ತು ಪ್ರಿಯದರ್ಶಿನಿ ಬಂಧಿತ ವೈದ್ಯರಾಗಿದ್ದಾರೆ.

ಜುಲೈ 2, 2022 ರಂದು ಹೆರಿಗೆಯ ವೇಳೆ ವೈದ್ಯರ ನಿರ್ಲಕ್ಷ್ಯದಿಂದ ಮಹಿಳೆ, ನವಜಾತ ಶಿಶು ಮೃತಪಟ್ಟಿದ್ದರಿಂದ  ವೈದ್ಯಕೀಯ ವರದಿಗಳ ಆಧಾರದ ಮೇಲೆ ಮೂವರು ವೈದ್ಯರನ್ನು ಬಂಧಿಸಲಾಗಿದೆ ಎಂದು ಪಾಲಕ್ಕಾಡ್ ಟೌನ್ ದಕ್ಷಿಣ ಪೊಲೀಸರು ತಿಳಿಸಿದ್ದಾರೆ.

ಹೆರಿಗೆ ಚಿಕಿತ್ಸೆಗಾಗಿ ದಾಖಲಾಗಿದ್ದ ಐಶ್ವರ್ಯ ಮತ್ತು ಅವರ ಮಗು ಖಾಸಗಿ ಆಸ್ಪತ್ರೆಯ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದಾರೆ ಎಂದು ಕುಟುಂಬ ಆರೋಪಿಸಿತ್ತು.

ಜುಲೈ ಮೊದಲ ವಾರದಲ್ಲಿ ಈ ಘಟನೆ ನಡೆದಿದ್ದು, ವ್ಯಾಪಕ ಪ್ರತಿಭಟನೆಗಳ ನಂತರ ವೈದ್ಯಕೀಯ ಮಂಡಳಿ ತನಿಖೆ ನಡೆಸಿತು.

ತನಿಖೆಯಲ್ಲಿ ಮೂವರು ವೈದ್ಯರ ವೈದ್ಯಕೀಯ ನಿರ್ಲಕ್ಷ್ಯ ಕಂಡುಬಂದಿದೆ. ಎರಡು ದಿನಗಳ ಹಿಂದೆ ನಡೆದ ಸಭೆಯ ನಂತರ, ಮಂಡಳಿಯು ತನ್ನ ವರದಿಯನ್ನು ಆರೋಗ್ಯ ಇಲಾಖೆಗೆ ಸಲ್ಲಿಸಿದ ಬಳಿಕ ಪೊಲೀಸರು ಬಂಧಿಸಿದ್ದಾರೆ.

Join Whatsapp
Exit mobile version