Home ಕರಾವಳಿ ಯಂಗ್ ಮೆನ್ಸ್ ಕುದ್ರೋಳಿ ವತಿಯಿಂದ ಸಾಮೂಹಿಕ ಸುನ್ನತ್ ಕಾರ್ಯಕ್ರಮ

ಯಂಗ್ ಮೆನ್ಸ್ ಕುದ್ರೋಳಿ ವತಿಯಿಂದ ಸಾಮೂಹಿಕ ಸುನ್ನತ್ ಕಾರ್ಯಕ್ರಮ

ಮಂಗಳೂರು: ಯಂಗ್ ಮೆನ್ಸ್ ಕುದ್ರೋಳಿ ವತಿಯಿಂದ ಮೊಹ್ದಿನ್ ನಗರ ಮೈದಾನದಲ್ಲಿ ಸುತ್ತಮುತ್ತಲ ಪ್ರದೇಶಗಳ ಮಕ್ಕಳಿಗೆ ಸಾಮೂಹಿಕ ಸುನ್ನತ್ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಸಮಿತಿಯ ಅಧ್ಯಕ್ಷ ಅಬ್ದುಲ್ ಅಝೀಝ್ ಎಎಟಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಖತೀಬ್ ಮುಹಮ್ಮದ್ ಬಾಖವಿ ಚಾಲನೆ ನೀಡಿದರು. ಡಾ ಝಾಹಿದ್ ಹುಸೈನ್ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾಜಿ ಕಾರ್ಪೊರೇಟರ್ ಬಿ ಅಬೂಬಕ್ಕರ್ ಹಾಜಿ, ಕಾರ್ಪೊರೇಟರ್ ಶಂಸುದ್ದೀನ್ ಎಚ್ ಬಿಟಿ, ಸಮಾಜ ಸೇವಕ ಅಶ್ರಫ್ ಕಿನಾರ ಮಂಗಳೂರು, ಮುಝೈರ್ ಕುದ್ರೋಳಿ, ಇಂತಿಯಾಝ್ ಬಾಯ್, ಹುಝೈಪ್ ಕುದ್ರೋಳಿ ಹಾಜರಿದ್ದರು. ಕಾರ್ಯಕ್ರಮ ದ್ವಿತೀಯ ಭಾಗವಾಗಿ ಎಲ್ಲಾ ಮಕ್ಕಳಿಗೆ ಔಷಧಗಳ ಕಿಟ್, ಹಣ್ಣು ಹಂಪಲು, ವಸ್ತ್ರಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮುಸ್ಲಿಂ ಐಕ್ಯತಾ ವೇದಿಕೆ ಅಧ್ಯಕ್ಷ ಯಾಸೀನ್ ಕುದ್ರೋಳಿ, ಕೋಶಾಧಿಕಾರಿ ಮಕ್ಬೂಲ್ ಅಹ್ ಮದ್, ಮಾಜಿ ಕಾರ್ಪೋಟರ್ ಅಬ್ದುಲ್ ಅಝೀಝ್, ಮೊಹ್ದಿನ್ ಜುಮಾ ಮಸೀದಿ ಅಧ್ಯಕ್ಷ ಪಿ ಪಿ ಅಬ್ದುಲ್ ಅಝೀಝ್, ಕಾರ್ಪೋರೇಟರ್ ಝೀನತ್ ಶಂಸುದ್ದೀನ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

Join Whatsapp
Exit mobile version