ಮಂಗಳೂರು: ಮಸೀದಿಗೆ ನುಗ್ಗಿ ಕಾಣಿಕೆ ಡಬ್ಬಿಗಳನ್ನು ಒಡೆದು ಹಣ ಕಳವು ಮಾಡಿದ ಕಳ್ಳರು

Prasthutha|

ಕೊಣಾಜೆ: ಮಸೀದಿಗೆ ಕಳ್ಳರು ನುಗ್ಗಿ ಡಬ್ಬಿಗಳನ್ನು ಒಡೆದು ಹಣ ಕಳವು ಮಾಡಿದ ಘಟನೆ ಪಜೀರು ಗ್ರಾಮದ ಅರ್ಕಾಣ ಬದ್ರಿಯಾ ಜುಮಾ ಮಸೀದಿಯಲ್ಲಿ ನಡೆದಿದೆ.

- Advertisement -


ಮಂಗಳವಾರ ರಾತ್ರಿ ವೇಳೆ ಮಸೀದಿಯ ಆವರಣ ಗೋಡೆಯಲ್ಲಿದ್ದ ಕಾಣಿಕೆ ಡಬ್ಬಿ ಸೇರಿದಂತೆ ಒಟ್ಟು ಆರು ಕಾಣಿಕೆ ಡಬ್ಬಿಗಳನ್ನು ಒಡೆದು ಹಣ ಕಳ್ಳತನ ಮಾಡಲಾಗಿದೆ. ಕಳ್ಳತನ ಮಾಡುದ ದೃಶ್ಯ ಮಸೀದಿಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.


ಕಳ್ಳತನ ಮಾಡಿರುವ ವ್ಯಕ್ತಿ ಮಸೀದಿಯ ಹೊರಗಿನ ಕಾಣಿಕೆ ಡಬ್ಬಿಯನ್ನು ಒಡೆದು ಬಳಿಕ ಮಸೀದಿಯ ಬಾಗಿಲನ್ನು ಮುರಿದು ಒಳಗೆ ನುಗ್ಗಿ ಒಟ್ಟು ಆರು ಡಬ್ಬಿಗಳನ್ನು ದೋಚಿದ್ದಾನೆ.
ಮಸೀದಿಗೆ ಶಾಸಕ ಯು.ಟಿ ಖಾದರ್, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



Join Whatsapp
Exit mobile version