Home ಕರಾವಳಿ ಮಂಗಳೂರು: ನವ ವಿವಾಹಿತೆ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ

ಮಂಗಳೂರು: ನವ ವಿವಾಹಿತೆ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ

ಮಂಗಳೂರು: ನವ ವಿವಾಹಿತೆಯೋರ್ವಳು ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಣಾಜೆಯಲ್ಲಿ ನಡೆದಿದೆ.


ಅಂಬ್ಲಮೊಗರು ಗ್ರಾಮದ ಕೋಟ್ರಗುತ್ತು ನಿವಾಸಿ ರಶ್ಮಿ ವಿಶ್ವಕರ್ಮ (24) ಮೃತ ನವ ವಿವಾಹಿತೆ ಎಂದು ಗುರುತಿಸಲಾಗಿದೆ.


ಆಗಸ್ಟ್ 21 ರಂದು ರಶ್ಮಿಯನ್ನು ಗಂಜಿಮಠ ಮೂಲದ ಸಂದೀಪ್ ಎಂಬವರಿಗೆ ಮದುವೆ ಮಾಡಿ ಕೊಡಲಾಗಿತ್ತು. ಆದರೆ ಈ ಮದುವೆ ರಶ್ಮಿಗೆ ಇಷ್ಟವಿರಲಿಲ್ಲ ಎನ್ನಲಾಗಿದೆ. ಸೆ.3 ರಂದು ರಶ್ಮಿ ಇಲಿ ಪಾಷಾಣ ಸೇವಿಸಿದ್ದು, ಬಳಿಕ ಕುಟುಂಬದವರು ಅವರನ್ನು ಖಾಸಗಿ ಅಸ್ಪತ್ರೆಗೆ ದಾಖಲಿಸಿದ್ದರು, ಆದರೆ ಚಿಕಿತ್ಸೆ ಫಲಿಸದೇ ರಶ್ಮಿ ಇಂದು ಮೃತಪಟ್ಟಿದ್ದಾರೆ.


ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Join Whatsapp
Exit mobile version