Home ಕರಾವಳಿ ಮಂಗಳೂರು: ಯುವಕನ ಹತ್ಯೆ| 144 ನಿಷೇಧಾಜ್ಞೆ ಜಾರಿ

ಮಂಗಳೂರು: ಯುವಕನ ಹತ್ಯೆ| 144 ನಿಷೇಧಾಜ್ಞೆ ಜಾರಿ

ಮಂಗಳೂರು: ಸುರತ್ಕಲ್ ನ ಕೃಷ್ಣಾಪುರದಲ್ಲಿ ನಡೆದ ಜಲೀಲ್ ಹತ್ಯೆ ಪ್ರಕರಣ ಹಿನ್ನೆಲೆಯಲ್ಲಿ ಸುರತ್ಕಲ್, ಬಜಪೆ, ಪಣಂಬೂರು, ಕಾವೂರು ಠಾಣಾ ವ್ಯಾಪ್ತಿಯಲ್ಲಿ 144 ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಘಟನೆ ನಡೆದ ಪ್ರದೇಶ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಡಿ.25 ರ ಮುಂಜಾನೆ 6 ಗಂಟೆಯಿಂದ ಡಿ.27 ರ ಮುಂಜಾನೆ 6 ರ ವರೆಗೆ 144 ಸೆಕ್ಷನ್ ಜಾರಿ ಮಾಡಲಾಗಿದ್ದು, 25 ಮತ್ತು 26 ರಂದು ಸುರತ್ಕಲ್, ಬಜಪೆ, ಪಣಂಬೂ, ಕಾವೂರು ವ್ಯಾಪ್ತಿಯಲ್ಲಿ ಇರುವ ಎಲ್ಲಾ ಕೈಗಾರಿಕಾ,ವಾಣಿಜ್ಯ ಸಂಕೀರ್ಣಗಳಲ್ಲಿ ಕಾರ್ಯನಿರ್ವಹಿಸುವವರ ಕರ್ತವ್ಯ ಪಾಳಿಯನ್ನು ಬದಲಿಸುವಂತೆ ಮತ್ತು ಸಂಜೆ 6ರ ಬಳಿಕ ಸಿಬ್ಬಂದಿಗಳು ರಸ್ತೆಯಲ್ಲಿ ಓಡಾಟ ನಡೆಸದಂತೆ ಸೂಚನೆ ನೀಡಲು ಮಂಗಳೂರು ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಆದೇಶಿಸಿದ್ದಾರೆ.  

ರಾತ್ರಿ ಕಾರ್ಯಾಚರಣೆ ವೇಳೆ ಅಹಿತಕರ ಘಟನೆಗಳು ನಡೆಯುವ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದ್ದು, ಈ ಭಾಗದಲ್ಲಿ ಡಿ.25 ರ ಮುಂಜಾನೆ 10 ಗಂಟೆಯಿಂದ ಡಿ.27 ರ 10 ಗಂಟೆ ವರೆಗೆ ಮಧ್ಯ ಮಾರಾಟ ಬಂದ್ ಮಾಡಲು ಸೂಚನೆ ನೀಡಲಾಗಿದೆ.

Join Whatsapp
Exit mobile version