Home ಟಾಪ್ ಸುದ್ದಿಗಳು ಮಂಗಳೂರು: ಕಣ್ಣೂರಿನಲ್ಲಿ ಮಣ್ಣು ಕುಸಿದು ಮನೆಗೆ ಹಾನಿ

ಮಂಗಳೂರು: ಕಣ್ಣೂರಿನಲ್ಲಿ ಮಣ್ಣು ಕುಸಿದು ಮನೆಗೆ ಹಾನಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರಿದಿದ್ದು, ಕಣ್ಣೂರು ಬಲ್ಲೂರು ಗುಡ್ಡೆ ಎಂಬ ಪ್ರದೇಶದಲ್ಲಿ ಮಣ್ಣು ಕುಸಿದು ಮನೆಗೆ ಹಾನಿಯಾಗಿದೆ.


ಕೆಲ ದಿನಗಳಿಂದ ದ.ಕ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ನೀರು ಹರಿಯಲು ಸ್ಥಳ ಇಲ್ಲದೆ  ಪಾಯದೊಳಗೆ ನೀರು ಹರಿದಿದ್ದರಿಂದ ಮಣ್ಣು ಸಡಿಲಗೊಂಡಿತ್ತು. ಅದರಿಂದಾಗಿ ಬುಧವಾರ ರಾತ್ರಿ ಏಕಾಏಕಿ  ಮಣ್ಣು ಕುಸಿದು ಬಿದ್ದಿದೆ. ಪರಿಣಾಮ ಉಮರ್ ಅವರ ಮನೆ ಹಾನಿಯಾಗಿದೆ.

ರಾತ್ರಿ 12ರ ಸುಮಾರಿಗೆ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ನಿವಾಸಿಗಳಿಗೆ ಯಾವುದೇ ತೊಂದರೆಯಾಗಿಲ್ಲ. ಜಿಲ್ಲಾ ಆಡಳಿತ ಇದಕ್ಕೆ ಬೇಕಾದ ಸೂಕ್ತ ಕ್ರಮ ಕೈಕೊಳ್ಳಬೇಕಾಗಿ ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.

Join Whatsapp
Exit mobile version