Home ಕರಾವಳಿ ಮಂಗಳೂರು: ಮಹಿಳೆಯರ ಮೇಲೆ ತಲ್ವಾರ್ ದಾಳಿ ಆರೋಪಿ ಹೇಳಿದ್ದೇನು ?

ಮಂಗಳೂರು: ಮಹಿಳೆಯರ ಮೇಲೆ ತಲ್ವಾರ್ ದಾಳಿ ಆರೋಪಿ ಹೇಳಿದ್ದೇನು ?

ಮಂಗಳೂರು: ಮೂವರು ಮಹಿಳೆಯರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನವೀನ್ ಶೆಟ್ಟಿ ಎಂಬಾತ ವಿಚಾರಣೆ ವೇಳೆ ಅಚ್ಚರಿಯ ವಿಚಾರ ಬಾಯ್ಬಿಟ್ಟಿದ್ದಾನೆ.


ಉಪನ್ಯಾಸಕಿ ವೀಣಾ ನನ್ನ ಮೇಲೆ ಬ್ಲ್ಯಾಕ್ ಮ್ಯಾಜಿಕ್ ಮಾಡಿದ್ದಾರೆ. ಕಾಲೇಜಿನಲ್ಲಿ ಓದುತ್ತಿದ್ದಾಗ ವೀಣಾ ನನ್ನನ್ನು ಅವಮಾನಿಸಿ, ಕಿರುಕುಳ ನೀಡುತ್ತಿದ್ದರು. ಅವರು ಬ್ಲ್ಯಾಕ್ ಮ್ಯಾಜಿಕ್ ಮಾಡಿದ್ದು, ಅದರಿಂದ ನನಗೆ ತೊಂದರೆಯಾಗುತ್ತಿದೆ ಎಂದಿದ್ದಾನೆ.
ಇದೇ ಕಾರಣಕ್ಕೆ ನಿನ್ನೆ ಬ್ಲ್ಯಾಕ್ ಮ್ಯಾಜಿಕ್ ತೆಗೆಯುವಂತೆ ಹೇಳಲು ಕಚೇರಿಗೆ ಬಂದಿದ್ದೆ. ಆದರೆ ವೀಣಾ ಆಫೀಸಿಗೆ ಬಂದಿಲ್ಲ ಎಂದು ಹೇಳಿದರು. ಇದರಿಂದ ಕೋಪ ಬಂದು ಹಲ್ಲೆ ಮಾಡಿದ್ದೇನೆ ಎಂದು ಹೇಳಿದ್ದಾನೆ.


ಸರ್ಕಾರಿ ಕಚೇರಿಗೆ ನುಗ್ಗಿದ್ದ ಆರೋಪಿ ನವೀನ್ ಅಲ್ಲಿನ ಮೂವರು ಮಹಿಳೆಯರು, ನಿರ್ಮಲಾ, ರೀನಾ ರಾಯ್ ಹಾಗೂ ಗುಣವತಿ ಎಂಬುವವರ ಮೇಲೆ ತಲ್ವಾರ್ ನಿಂದ ಹಲ್ಲೆ ನಡೆಸಿದ್ದ.

Join Whatsapp
Exit mobile version