Home ಕರಾವಳಿ ಮಂಗಳೂರು | ಗುಂಡಿಗೆ ಮಹಿಳೆ ಬಿದ್ದ ಪ್ರಕರಣ: ಏರ್’ಟೆಲ್ ಕಂಪೆನಿ ವಿರುದ್ಧ ದೂರು

ಮಂಗಳೂರು | ಗುಂಡಿಗೆ ಮಹಿಳೆ ಬಿದ್ದ ಪ್ರಕರಣ: ಏರ್’ಟೆಲ್ ಕಂಪೆನಿ ವಿರುದ್ಧ ದೂರು

ಮಂಗಳೂರು: ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಹಂಪನಕಟ್ಟೆಗೆ ಹೋಗುವ ರಸ್ತೆ ಬದಿ ಪಾದಚಾರಿ ಮಹಿಳೆಯೊಬ್ಬರು ಗುಂಡಿಗೆ ಬಿದ್ದು ಗಾಯಗೊಂಡ ಪ್ರಕರಣ ಸಂಬಂಧಿಸಿದಂತೆ ಏರ್’ಟೆಲ್ ಕಂಪೆನಿ ವಿರುದ್ಧ ದೂರು ದಾಖಲಾಗಿದೆ.


ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಹಂಪನಕಟ್ಟೆಗೆ ಹೋಗುವ ರಸ್ತೆ ಬದಿ ಲಕ್ಷ್ಮೀದಾಸ್ ಜ್ಯುವೆಲ್ಲರ್ಸ್ ಮುಂಭಾಗ ಕಾಲುದಾರಿಯಲ್ಲಿ ಕೇಬಲ್ ದುರಸ್ತಿಗಾಗಿ ಹೊಂಡೆ ಅಗೆಯಲಾಗಿದೆ. ಇದಕ್ಕೆ ಮಹಾನಗರ ಪಾಲಿಕೆಯಿಂದ ಯಾವುದೇ ಅನುಮತಿ ಪಡೆದುಕೊಂಡಿಲ್ಲ. ಹೊಂಡ ಅಗೆಯುವ ಸಮಯದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಕಂಪೆನಿ ತೆಗೆದುಕೊಂಡಿಲ್ಲ. ಮತ್ತು ಕೇಬಲ್ ದುರಸ್ತಿಯಾದ ಬಳಿಕವೂ ಹೊಂಡ ಮುಚ್ಚದೇ ಇರುವುದರಿಂದ ಡಿಸೆಂಬರ್ 19ರಂದು ಪಾದಚಾರಿ ಮಹಿಳೆಯೊಬ್ಬರು ಈ ಹೊಂಡಕ್ಕೆ ಬಿದ್ದು ಗಾಯಗೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.


ಸದ್ಯ ಈ ಹೊಂಡವನ್ನು ಮಹಾನಗರ ಪಾಲಿಕೆಯಿಂದಲೇ ಮುಚ್ಚಲಾಗಿದೆ.

Join Whatsapp
Exit mobile version