Home ಜಾಲತಾಣದಿಂದ ಮಂಗಳೂರು: ವಿಮಾನಯಾನ ಸುರಕ್ಷತಾ ಸಪ್ತಾಹಕ್ಕೆ ಸಿದ್ದರಾಮಯ್ಯ ಚಾಲನೆ

ಮಂಗಳೂರು: ವಿಮಾನಯಾನ ಸುರಕ್ಷತಾ ಸಪ್ತಾಹಕ್ಕೆ ಸಿದ್ದರಾಮಯ್ಯ ಚಾಲನೆ

ಮಂಗಳೂರು: ನಾಗರೀಕ ವಿಮಾನ ಯಾನ ಸುರಕ್ಷತಾ ದಳದಿಂದ ದೇಶದಾದ್ಯಂತ ನಾಗರೀಕ ವಿಮಾನ ಯಾನ ಸುರಕ್ಷತಾ ಸಪ್ತಾಹವನ್ನು ಜು.31ರಿಂದ ಆಗಸ್ಟ್ 5ರ ವರೆಗೆ ಹಮ್ಮಿಕೊಳ್ಳಲಾಗಿದೆ.

 ಬಜಪೆಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಆ.1ರ ಮಂಗಳವಾರ ಸುರಕ್ಷತಾ ಸಪ್ತಾಹಕ್ಕೆ ಚಾಲನೆ ನೀಡಿದರು.

ಸಪ್ತಾಹದಲ್ಲಿ ವಿಮಾನಯಾನ, ಭದ್ರತೆ ಬಗ್ಗೆ ಜಾಗೃತಿ ಮೂಡಿಸಲು ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗುತ್ತದೆ. ಇದು ಪ್ರಯಾಣಿಕರಲ್ಲಿ ಸುರಕ್ಷತಾ ಕ್ರಮಗಳನ್ನು ಹೆಚ್ಚಿಸಲು ಮತ್ತು ಪ್ರಯಾಣಿಕರು ಮತ್ತು ವಾಯುಯಾನ ಸಿಬ್ಬಂದಿಗೆ ಸುರಕ್ಷಿತ ವಾತಾವರಣವನ್ನು ಖಚಿತಪಡಿಸಿಕೊಳ್ಳುವ ಗುರಿ ಹೊಂದಿದೆ. 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೇರಿದಂತೆ ಏರ್ ಪೋರ್ಟ್ ಅಧಿಕಾರಿಗಳು‌ ಹಾಗೂ ಮುಖಂಡರಿದ್ದರು.

Join Whatsapp
Exit mobile version