ಮಂಗಳೂರು | ಮೀನುಗಾರಿಕೆಗೆ ತೆರಳಿದ್ದ ಬೋಟ್ ದುರಂತ: ಓರ್ವ ನಾಪತ್ತೆ, ನಾಲ್ವರ ರಕ್ಷಣೆ

Prasthutha|

ಮಂಗಳೂರು: ಮೀನುಗಾರಿಕೆಗೆ ತೆರೆಳಿದ್ದ ಗಿಲ್ ನೆಟ್  ಬೋಟ್ ಬಿರುಗಾಳಿಗೆ ಸಿಲುಕಿ ಓರ್ವ ಮೀನುಗಾರ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿರುವ ಘಟನೆ ಇಂದು ಮುಂಜಾನೆ ಪಣಂಬೂರು ಬೀಚ್ ಬಳಿ ಸಂಭವಿಸಿದೆ.

- Advertisement -

ಕಸಬಾ ಬೆಂಗರೆ ನಿವಾಸಿ ಶರೀಫ್ ನಾಪತ್ತೆಯಾಗಿದ್ದಾನೆಂದು ತಿಳಿದು ಬಂದಿದೆ. ಅಲ್ಲದೆ ಅಬ್ದುಲ್ ಅಜೀಜ್, ಇಂತಿಯಾಜ್, ಸಿನಾನ್, ಫೈರೋಜ್ ಎಂಬವರನ್ನು ಅಲ್ಲಿನ ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

ನಾಪತ್ತೆಯಾದ ಶರೀಫ್ ಗಾಗಿ ಹುಡುಕಾಟ ನಡೆಸಲಾಗುತ್ತಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Join Whatsapp