Home ಕರಾವಳಿ ಮಂಗಳೂರು: ಬೋಟ್ ಚಾಲಕ ನಾಪತ್ತೆ

ಮಂಗಳೂರು: ಬೋಟ್ ಚಾಲಕ ನಾಪತ್ತೆ

ಮಂಗಳೂರು: ಮೀನುಗಾರಿಕೆ ವೇಳೆ ಯುವಕನೋರ್ವ ನಾಪತ್ತೆಯಾಗಿದ ಘಟನೆ ನಡೆದಿದೆ. ಮುನೀಶ್‌ ಕುಮಾರ್‌ (32) ನಾಪತ್ತೆಯಾದ ಯುವಕ. ಇವರು ದಕ್ಷಿಣ ದಕ್ಕೆಯಲ್ಲಿ ಇರ್ಫಾನ್‌ ಅವರ ಮಾಲಕತ್ವದ ಕುವತ್‌ ಹೆಸರಿನ ಬೋಟ್‌ನ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದರು.

ಎ.15ರಂದು ರಾತ್ರಿ 10 ಗಂಟೆಗೆ ಇತರ 10 ಮಂದಿ ಮೀನುಗಾರರೊಂದಿಗೆ ಮೀನುಗಾರಿಕೆ ತೆರಳಿದ್ದ ಮುನೀಶ್‌ ಕುಮಾರ್‌, ಎ. 17ರಂದು ಮೀನು ಹಿಡಿಯುವ ಕೆಲಸ ಮಾಡುತ್ತಿದ್ದಾಗ ಆಯತಪ್ಪಿ ಸಮುದ್ರಕ್ಕೆ ಬಿದ್ದಿದ್ದಾರೆ. ಉಳಿದ ಮೀನುಗಾರರು ಹುಡುಕಾಟ ನಡೆಸಿದರೂ ಮುನೀಶ್‌ ಕುಮಾರ್‌ ಪತ್ತೆಯಾಗಿರಲಿಲ್ಲ.

ಮುನೀಶ್ ಕುಮಾರ್ ಏನಾದರು ಎಂದು ಅವರ ಕುಟುಂಬ ರೋದಿಸುತ್ತಿದೆ ಎಂದು ವರದಿಯಾಗಿದೆ.

Join Whatsapp
Exit mobile version