Home ಕರಾವಳಿ ಮಂಗಳೂರು| ಬೈಕ್ ಅಪಘಾತ; ವೈದ್ಯಕೀಯ ವಿದ್ಯಾರ್ಥಿ ದಾರುಣ ಸಾವು, ಸಹಸವಾರ ಗಂಭೀರ

ಮಂಗಳೂರು| ಬೈಕ್ ಅಪಘಾತ; ವೈದ್ಯಕೀಯ ವಿದ್ಯಾರ್ಥಿ ದಾರುಣ ಸಾವು, ಸಹಸವಾರ ಗಂಭೀರ

ಮಂಗಳೂರು: ರಸ್ತೆ ಹಂಪ್’ಗೆ ಬೆಂಗಳೂರಿನ ವೈದ್ಯ​ ವಿದ್ಯಾರ್ಥಿ ಸಾವನ್ನಪ್ಪಿ, ಸಹ ಸವಾರ ಗಾಯಗೊಂಡಿರುವ ದಾರುಣ ಘಟನೆ ಕುತ್ತಾರು ಸಮೀಪದ ಮದಕ ಕ್ವಾಟ್ರಗುತ್ತು ಬಳಿ ನಿನ್ನೆ ಮಧ್ಯರಾತ್ರಿ ಸಂಭವಿಸಿದೆ.

ಯಶವಂತಪುರದ ಶಿಕ್ಷಕ ಸಿದ್ದರಾಜು ಎಂಬವರ ಪುತ್ರ ನಿಶಾಂತ್ (22) ಮೃತಪಟ್ಟವರು. ಸಹಸವಾರ ಬೀದರ್ ನಿವಾಸಿ ಶಕೀಬ್ ಗಾಯಗೊಂಡಿದ್ದಾರೆ. ಇಬ್ಬರೂ ನಾಟೆಕಲ್ ಕಣಚೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪೂರೈಸಿ ದ್ವಿತೀಯ ವರ್ಷದ ಇಂಟನ್೯ಶಿಪ್ ನಡೆಸುತ್ತಿದ್ದರು.

ಕುತ್ತಾರು ಸಿಲಿಕೋನಿಯಾ ಫ್ಲ್ಯಾಟ್​’ನಲ್ಲಿ ವಾಸಿಸುತ್ತಿದ್ದ ಇಬ್ಬರೂ ರಾತ್ರಿ ಬೈಕಿನಲ್ಲಿ ಜಾಲಿ ರೈಡ್ ತೆರಳುವಾಗ ರಸ್ತೆಯಲ್ಲಿದ್ದ ಹಂಪ್ ಗಮನಕ್ಕೆ ಬಾರದೇ ನಿಯಂತ್ರಣ ತಪ್ಪಿ ಬಿದ್ದು ಸವಾರ ನಿಶಾಂತ್ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಹೆಚ್ಚು ವಾಹನ ಸಂಚಾರವಿಲ್ಲದ ರಸ್ತೆಯಾಗಿದ್ದರಿಂದ ರಾತ್ರಿ‌ 12.15ಕ್ಕೆ ಆದ ಅಪಘಾತ 12.30ರ ವೇಳೆ ಸ್ಥಳೀಯರ ಗಮನಕ್ಕೆ ಬಂದಿದೆ. ತಕ್ಷಣ ಹಿಂಬದಿ ಸವಾರನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮಂಗಳೂರು ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp
Exit mobile version