ಮಂಗಳೂರು: ಗುಜರಿ ಸೇರಲಿರುವ ‘ಭಗವತಿ ಪ್ರೇಮ್’ ನೌಕೆ| ಮುಳುಗಿದ ಹಡಗಿನ ಒಡೆಯುವ ಕಾರ್ಯ ಆರಂಭ

Prasthutha|

ಮಂಗಳೂರು: ‘ಭಗವತಿ ಫ್ರೇಮ್’ ಎಂಬ ಹೆಸರಿನ ಬೃಹದಾದ ಡ್ರೆಜ್ಜರ್ ನೌಕೆಯೊಂದು ನಗರದ ಹೊರವಲಯದ ಸುರತ್ಕಲ್‌ನ ಗುಡ್ಡೆಕೊಪ್ಲ ಸಮುದ್ರ ಬದಿಯಲ್ಲಿ ನಿಷ್ಕ್ರೀಯಗೊಂಡು ನಿಂತಿದ್ದು, ಸ್ಥಳೀಯ ಮೀನುಗಾರರಿಗೆ ಸಾಕಷ್ಟು ತೊಂದರೆ ಕೊಡುತ್ತಿತ್ತು.

- Advertisement -

ಇದೀಗ ಮೂರು ವರ್ಷಗಳ ನಂತರ ಈ ಬೃಹತ್ ನೌಕೆಗೆ ಮುಕ್ತಿ ನೀಡುವ ಕಾರ್ಯ ಆರಂಭವಾಗಿದೆ. ಈ ನಿಂತಿರುವ ಡ್ರೆಜ್ಜರ್ ನೌಕೆಯು 114 ಮೀಟರ್ ಉದ್ದ, 21 ಮೀಟರ್ ಅಗಲ, 9,492 ಟನ್ ತೂಕವನ್ನು ಹೊಂದಿದೆ. ಕಡಲ ಕಿನಾರೆಯಲ್ಲಿ ಮುಳುಗಿರುವ ಈ ಡ್ರೆಜ್ಜರ್‌‌ನ್ನು ಒಡೆಯುವ ಕಾರ್ಯ ಆರಂಭವಾಗಿದೆ.

- Advertisement -

ಭಗವತಿ ಪ್ರೇಮ್ ಡ್ರೆಜ್ಜರ್​ನ್ನು ಸಮುದ್ರದಲ್ಲಿ ನಿಲುಗಡೆ ಮಾಡಲಾಗಿದ್ದ ಸಂದರ್ಭದಲ್ಲಿ ಮುಳುಗಿದ್ದು, ಅದರಲ್ಲಿದ್ದವರನ್ನು ರಕ್ಷಣೆ ಮಾಡಲಾಗಿತ್ತು. ಬಳಿಕ ಸಮುದ್ರದಲ್ಲಿ ಉಳಿದಿದ್ದ ಈ ಹಡಗನ್ನು 2019ರ ಅಕ್ಟೋಬರ್‌‌ನಲ್ಲಿ ಗುಡ್ಡೆಕೊಪ್ಪ ಸಮುದ್ರ ತೀರಕ್ಕೆ ತಂದು ನಿಲ್ಲಿಸಲಾಗಿತ್ತು. ಇದರಿಂದಾಗ ಇಲ್ಲಿನ ಮೀನುಗಾರರಿಗೆ ಮೀನುಗಾರಿಕೆ ನಡೆಸುವುದಕ್ಕೆ ತೊಂದರೆಯುಂಟಾಗಿತ್ತು.

ಇದೀಗ ಡ್ರೆಜ್ಜರ್ ಅನ್ನು ಮಾಲಿನ್ಯವಿಲ್ಲದೇ ಕತ್ತರಿಸಿ ತೆಗೆಯಬೇಕೆಂಬ ಮೀನುಗಾರರ ಮನವಿಗೆ ಸೂಕ್ತ ಸ್ಪಂದನೆ ದೊರಕಿದ್ದು, ಸುಮಾರು 50ರಷ್ಟು ಉತ್ತರ ಭಾರತದ ಕಾರ್ಮಿಕರು ಡ್ರೆಜ್ಜರ್ ಕತ್ತರಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಆರು ತಿಂಗಳಲ್ಲಿ ಡ್ರೆಜ್ಜರ್ ಅನ್ನು ಸಂಪೂರ್ಣ ಕತ್ತರಿಸಿ ಗುಜರಿಗೆ ಹಾಕಲಾಗುವುದು ಎಂದು ತಿಳಿದುಬಂದಿದೆ.

ಟೆಂಡರ್ ಕರೆದು ಹಡಗು ಒಡೆಯುವ ಗುತ್ತಿಗೆ ನೀಡಿದ್ದು ಶೀಘ್ರದಲ್ಲಿ ಹಡಗು ತೆರವಾಗಿ ಮೀನುಗಾರರ ಸಮಸ್ಯೆಗೆ ಮುಕ್ತಿ ದೊರೆಯಲಿದೆ.

Join Whatsapp