Home ಟಾಪ್ ಸುದ್ದಿಗಳು ಶ್ರೀರಂಗಪಟ್ಟಣ ಚಲೋ ಹಿನ್ನೆಲೆ : 144 ಸೆಕ್ಷನ್ ಜಾರಿ

ಶ್ರೀರಂಗಪಟ್ಟಣ ಚಲೋ ಹಿನ್ನೆಲೆ : 144 ಸೆಕ್ಷನ್ ಜಾರಿ

ಮಂಡ್ಯ: ಮಂಡ್ಯ ಮಸೀದಿಯಲ್ಲಿ ದೇವರ ಕುರುಹು ಪತ್ತೆಯಾಗಿದೆ ಎಂದು ಆರೋಪಿಸಿ ಹಿಂದುತ್ವ ಪರ ಸಂಘಟನೆಗಳು ಶ್ರೀರಂಗಪಟ್ಟಣ ಚಲೋ ಹಮ್ಮಿಕೊಂಡ ಹಿನ್ನಲೆಯಲ್ಲಿ ಇಂದು ಶ್ರೀರಂಗಪಟ್ಟಣದಾದ್ಯಂತ 144 ಸೆಕ್ಷನ್ ಜಾರಿಗೊಳಿಸಲಾಗಿದೆ.

ಮಸೀದಿ ಖಾಲಿ ಮಾಡಬೇಕು, ವೀಡಿಯೊ ಸರ್ವೆ ನಡೆಸಬೇಕು , ಪೂಜೆಗೆ ಅವಕಾಶ ಕೊಡಬೇಕು ಎಂದು ಸಂಘರ್ಷ ಹೋರಾಟಕ್ಕೆ ಕರೆಕೊಟ್ಟು ಹಿಂದುತ್ವ ಸಂಘಟನೆಗಳಿಂದ ಆಯೋಜಿಸಿದ್ದ ಶ್ರೀರಂಗಪಟ್ಟಣ ಚಲೋ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಲಾಗಿದೆ.

ಚಲೋ ಜಾಥಾವನ್ನು ನಿರಾಕರಿಸಿದ್ದು ಸಂಘರ್ಷ ಉಂಟಾಗದಿರಲು ಶ್ರೀರಂಗಪಟ್ಟಣದಾದ್ಯಂತ 144 ಸೆಕ್ಷನ್ ಜಾರಿಗೊಳಿಸಲಾಗಿದ್ದು ಹೆಚ್ಚಿನ ಪೊಲೀಸ್ ಭದ್ರತೆಯನ್ನು ಒಗದಿಸಲಾಗಿದೆ ಎಂದು ಜಿಲ್ಲಾ ಎಸ್ ಪಿ ಹೇಳಿದ್ದಾರೆ . ಮತ್ತು ಕಾನೂನು ಕ್ರಮ ಕೈಗೊಳ್ಳಲು ಯತ್ನಿಸಿದರೆ ನಿರ್ಧಾಕ್ಷಿಣ್ಯ ಬಂಧಿಸಲಾಗುವುದು ಎಂದು ಕೂಡಾ ಎಚ್ಚರಿಸಿದ್ದಾರೆ

Join Whatsapp
Exit mobile version