Home Uncategorized ಸಿದ್ದಾಪುರ: ಮರದಿಂದ ಬಿದ್ದು ಸಾವು

ಸಿದ್ದಾಪುರ: ಮರದಿಂದ ಬಿದ್ದು ಸಾವು

ಸಿದ್ದಾಪುರ: ತೆಂಗಿನ ಮರದಿಂದ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಅವರೆಗುಂದದಲ್ಲಿ ಸಂಭವಿಸಿದೆ. ಅವರೆಗುಂದ ನಿವಾಸಿ ಹರೀಶ (54) ಮೃತ ದುರ್ದೈವಿ.

ಮಂಗಳವಾರ ಮಧ್ಯಾಹ್ನ ಅವರೆಗುಂದದಲ್ಲಿ ತೆಂಗಿನ ಕಾಯಿ ಕೀಳುತ್ತಿದ್ದ ಸಂದರ್ಭದಲ್ಲಿ ಕಾಲು ಜಾರಿ ಬಿದ್ದು ಘಟನೆ ಸಂಭವಿಸಿದೆ. ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ. ಮೃತರು ಪತ್ನಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ.

Join Whatsapp
Exit mobile version