Home ಟಾಪ್ ಸುದ್ದಿಗಳು ಸಂಸತ್ ಸಮಿತಿ ತನಿಖೆಯ ಕಹಿಯಲ್ಲಿರುವ ಮಹುವಾ ಮೊಯಿತ್ರಾಗೆ ಹೊಸ ಜವಾಬ್ದಾರಿಯ ಸಿಹಿ ನೀಡಿದ ಮಮತಾ ಬ್ಯಾನರ್ಜಿ

ಸಂಸತ್ ಸಮಿತಿ ತನಿಖೆಯ ಕಹಿಯಲ್ಲಿರುವ ಮಹುವಾ ಮೊಯಿತ್ರಾಗೆ ಹೊಸ ಜವಾಬ್ದಾರಿಯ ಸಿಹಿ ನೀಡಿದ ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ‘ಹಣಕ್ಕಾಗಿಪ್ರಶ್ನೆ’ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಸಭೆಯ ನೈತಿಕ ಸಮಿತಿಯಿಂದ ಸಂಸತ್‌ನಿಂದ ಉಚ್ಚಾಟನೆಗೆ ಶಿಫಾರಸು ಎದರಿಸುತ್ತಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರ ಬೆಂಬಲಕ್ಕೆ ಪಕ್ಷ ನಿಂತಿದೆ. ಕೃಷ್ಣನಗರ(ನಾಡಿಯಾ ಉತ್ತರ) ಜಿಲ್ಲಾದ್ಯಕ್ಷೆಯನ್ನಾಗಿ ಮಾಡಿದೆ. 2024 ರ ಸಾರ್ವತ್ರಿಕ ಚುನಾವಣೆಗೆ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡಲು ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಟಿಎಂಸಿ ಇಂದು ರಾಜ್ಯದ 35 ಜಿಲ್ಲೆಗಳ ಜಿಲ್ಲಾಧ್ಯಕ್ಷರ ಪರಿಷ್ಕೃತ ಪಟ್ಟಿಯನ್ನು ಪ್ರಕಟಿಸಿದ್ದು, ಕೃಷ್ಣನಗರ ಜಿಲ್ಲಾಧ್ಯಕ್ಷರಾಗಿ ಮಹುವಾ ಮೊಯಿತ್ರಾ ಅವರನ್ನು ನೇಮಕ ಮಾಡಲಾಗಿದೆ. ಅವರು ಕೆಲವು ವರ್ಷಗಳ ಹಿಂದೆ ಕೃಷ್ಣಾನಗರ ಜಿಲ್ಲಾಧ್ಯಕ್ಷರಾಗಿದ್ದ ಕಾರ್ಯನಿರ್ವಹಿಸಿದ್ದರು.

ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮಹುವಾ ಮೊಯಿತ್ರಾ , ನನ್ನನ್ನು ಕೃಷ್ಣನಗರ(ನಾಡಿಯಾ ಉತ್ತರ) ಜಿಲ್ಲಾಧ್ಯಕ್ಷರನ್ನಾಗಿ ನೇಮಿಸಿದ್ದಕ್ಕಾಗಿ ಮಮತಾ ಬ್ಯಾನರ್ಜಿ ಅವರಿಗೆ ಮತ್ತು ಟಿಎಂಸಿಗೆ ಧನ್ಯವಾದಗಳು. ಕೃಷ್ಣನಗರದ ಜನರಿಗಾಗಿ ಪಕ್ಷದೊಂದಿಗೆ ಯಾವಾಗಲೂ ಕೆಲಸ ಮಾಡುತ್ತೇನೆ ಎಂದು ಬರೆದಿದ್ದಾರೆ.

Join Whatsapp
Exit mobile version