ಮಹಾರಾಷ್ಟ್ರ: ಶರದ್ ಪವಾರ್ ವಿರುದ್ಧ ವಿವಾದಾತ್ಮಕ ಹೇಳಿಕೆ; ಬಿಜೆಪಿ ಶಾಸಕ, ಮಾಜಿ ಸಂಸದ ಮೇಲೆ ಪ್ರಕರಣ ದಾಖಲು

Prasthutha|

ಮುಂಬೈ: NCP ಮುಖ್ಯಸ್ಥ ಶರದ್ ಪವಾರ್ ಅವರು ದಾವೂದ್ ಇಬ್ರಾಹಿಂ ಜೊತೆ ನಂಟು ಹೊಂದಿದ್ದಾರೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ನಿತೇಶ್ ರಾಣೆ ಮತ್ತು ಮಾಜಿ ಸಂಸದ ನಿಲೇಶ್ ರಾಣೆ ವಿರುದ್ಧ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

- Advertisement -

ನಿತೇಶ್ ಮತ್ತು ನಿಲೇಶ್ ಕೇಂದ್ರ ಸಚಿವ ನಾರಾಯಣ ರಾಣೆ ಅವರ ಪುತ್ರರಾಗಿದ್ದಾರೆ.

NCP ನಾಯಕ ಸೂರಜ್ ಚವಾಣ್ ಶನಿವಾರ ಆಝಾದ್ ಮೈದಾನ್ ಪೊಲೀಸ್ ಠಾಣೆಯಲ್ಲಿ ಇಬ್ಬರ ವಿರುದ್ಧ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ. NCP ಮುಖ್ಯಸ್ಥ ಶರದ್ ಪವಾರ್ ವಿರುದ್ಧ ಮಾನಹಾನಿಕರ ಸುಳ್ಳಾರೋಪ ಮಾಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

- Advertisement -

ಸದ್ಯ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 153, 497 ಮತ್ತು 570 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ಮಧ್ಯೆ ನಿತೇಶ್ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಪ್ರಕರಣ ದಾಖಲಿಸಿದರೆ ನಾವೇನು ಮಾಡುತ್ತೇವೆಂದು ಪೊಲೀಸರಿಗೆ ತೋರಿಸುತ್ತೇವೆ. ನಾವು ಹೇಳಿದ್ದರಲ್ಲಿ ತಪ್ಪೇನಿದೆ?. ನಾವು ಹಿಂದುತ್ವದ ಪರ ಕಾರ್ಯ ನಿರ್ವಹಿಸುತ್ತೇವೆ. ನಾವೇನು ಗಲಭೆವೆಬ್ಬಿಸುವ ಪ್ರಯತ್ನ ಮಾಡಿಲ್ಲ. ಹಿಂದುತ್ವದ ಪರವಾಗಿ ನಿಲ್ಲುವುದು ತಪ್ಪಾಗಿದ್ದರೆ, ನಾವು ಆ ತಪ್ಪನ್ನು 100 ಸಲ ಮಾಡುತ್ತೇವೆ ಎಂದು ಆಕ್ರೋಶದಿಂದ ತಿಳಿಸಿದ್ದಾರೆ.

Join Whatsapp
Exit mobile version