ಸಂಘೀ – ದಳಗಳು ಶೌರ್ಯ ಮೆರೆಯಲು ಮುಸ್ಲಿಮರೊಂದಿಗೆ ಚೀನಾ ಗಡಿಗೆ ತೆರಳಲಿ: ಕೆ.ಅಶ್ರಫ್

Prasthutha|

ಮಂಗಳೂರು: ರಾಜ್ಯದ ಕಳೆದ ವಿಧಾನಸಭಾ ಜನಾದೇಶದಲ್ಲಿ ಕರ್ನಾಟಕದ ಜನತೆ ಮನುವಾದಿ ಪ್ರಣಾಳಿಕೆಗೆ ತಕ್ಕ ಉತ್ತರ ನೀಡಿದ ನಂತರ ಚಡಪಡಿಸುವ ಸಂಘಿ – ದಳ ಗಳು ರಾಜ್ಯದ ಉದ್ದ ಅಗಲಕ್ಕೆ ಮತೀಯ ಉದ್ವಿಗ್ನ ಸೃಷ್ಟಿಸುವ ಉದ್ದೇಶದಿಂದ ಶಸ್ತ್ರ ಸಜ್ಜಿತವಾಗಿ ಶೌರ್ಯ ಯಾತ್ರೆ ಎಂದು ಹೊರಟಿದೆ. ಕರಾವಳಿ ಜಿಲ್ಲೆಗಳಲ್ಲಿ ಮತ್ತೆ ಮುಸ್ಲಿಮರ ವಿರುದ್ಧ ಕೋಮು ದ್ವೇಷ ಕಾರುವ ಬಾಡಿಗೆ ಬಾಷಣ ಕಾರರನ್ನು ಬಳಸಿ ವಿಷ ಕಕ್ಕುವ ಕೆಲಸ ಮಾಡುತ್ತಿದೆ ಎಂದು ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ, ಮಾಜಿ ಮೇಯರ್ ಕೆ. ಅಶ್ರಫ್ ಆಕ್ರೋಶ ವ್ಯಕ್ತಪಡಿಸಿದ್ಧಾರೆ.

- Advertisement -


ನಾಡಿನ ಸಹ ಪ್ರಜೆಗಳ ವಿರುದ್ಧವೇ ‘ ಶೌರ್ಯ ‘ ಮೆರೆಯಲು ಹೊರಟಿರುವ ಈ ಸಂಘಿ ದಳಾದಿಗಳು ನೈಜ ದೇಶ ಪ್ರೇಮಿಗಳಾಗಿದ್ದರೆ ಮುಸ್ಲಿಮರೊಂದಿಗೆ ಸೇರಿ ಈ ದೇಶದ ನೆಲವನ್ನು ಸಂರಕ್ಷಿಸಲು ಚೀನಾ ಗಡಿ ರೇಖೆಗೆ ತೆರಳಿ ಶತ್ರು ದೇಶದ ಸೈನಿಕರೊಂದಿಗೆ ಹೋರಾಡಲು ಸಿದ್ಧರಾಗಲಿ. ಸಂಘಿ – ದಳಗಳ ನೇತೃತ್ವವನ್ನು ನಮ್ಮ ನೆಚ್ಚಿನ ಹೆಂಗ್ ಪುಂಗ್ಲಿ ಚಕ್ರವರ್ತಿ ಸೂಲಿಬೆಲೆ ವಹಿಸಿ ಕೊಳ್ಳಲಿ. ಇಂದೇ ಗಡಿಗೆ ತೆರಳುವ ದೇಶ ಪ್ರೇಮಿಗಳ ನೋಂದಣಿ ನಡೆಯಲಿ ಎಂದು ಅವರು ಸಲಹೆ ನೀಡಿದ್ದಾರೆ.



Join Whatsapp
Exit mobile version