Home ಟಾಪ್ ಸುದ್ದಿಗಳು ವಿಧಾನ ಪರಿಷತ್ ಚುನಾವಣೆ: ಬಿಜೆಪಿ ಸಭೆಯಲ್ಲಿ ಶಾಸಕರ ನಡುವೆ ಮಾರಾಮಾರಿ

ವಿಧಾನ ಪರಿಷತ್ ಚುನಾವಣೆ: ಬಿಜೆಪಿ ಸಭೆಯಲ್ಲಿ ಶಾಸಕರ ನಡುವೆ ಮಾರಾಮಾರಿ

ಹುಬ್ಬಳ್ಳಿ: ರಾಜ್ಯ ವಿಧಾನ ಪರಿಷತ್ ಚುನಾವಣೆಯ ಉಸ್ತುವಾರಿ ಹಂಚಿಕೆ ವಿಷಯಕ್ಕೆ ‌ಸಂಬಂಧಿಸಿದಂತೆ ರಾಣೆಬೆನ್ನೂರು ಶಾಸಕ ಅರುಣಕುಮಾರ ಪೂಜಾರ ಹಾಗೂ ವಿಧಾನ ಪರಿಷತ್ ಸದಸ್ಯ ಆರ್. ಶಂಕರ್ ನಡುವೆ ಇಲ್ಲಿನ ಕ್ಯುಬಿಕ್ಸ್ ಹೋಟೆಲ್‌ನಲ್ಲಿ ಬಿಜೆಪಿ ಪ್ರಮುಖರ  ಸಭೆಯಲ್ಲೇ ಗಲಾಟೆ ನಡೆದಿದೆ.

ಈ ಮೊದಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಸಭೆ ನಡೆಸಿ ತೆರಳಿದ್ದರು. ಬಳಿಕ ನಡೆದ ಇನ್ನೊಂದು ಸಭೆಯಲ್ಲಿ ಈ ಘಟನೆ ನಡೆದಿದೆ. ಗಲಾಟೆ ಜೋರಾಗುತ್ತಿದ್ದಂತೆ ಇಬ್ಬರೂ ಶಾಸಕರ ಬೆಂಬಲಿಗರು ಶಾಸಕ ಜಗದೀಶ ಶೆಟ್ಟರ್ ಸಮ್ಮುಖದಲ್ಲೇ ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದರು.

ನಾನು ರಾಜೀನಾಮೆ ಕೊಡುವೆ ಎಂದು ಅರುಣಕುಮಾರ ಪೂಜಾರ  ಹೇಳಿದ್ದು, ಆಗ ಮಧ್ಯ ಪ್ರವೇಶಿಸಿದ ಕೆಲ ಕಾರ್ಯಕರ್ತರು ಹಾಗೂ  ಜಗದೀಶ ಶೆಟ್ಟರ್ ಎಲ್ಲರನ್ನೂ ಸಮಾಧಾನ ಪಡಿಸಿದರು.

ಘಟನೆ ಬಳಿಕ ಕೆಲ ಹೊತ್ತು ಹೋಟೆಲ್‌ ನ ಕೊಠಡಿಯಲ್ಲಿ  ಕುಳಿತು ಆರ್. ಶಂಕರ್ ನಿರ್ಗಮಿಸಿದರು.

ನಿನ್ನೆ ಕೂಡ ಹಾಸನದಲ್ಲಿ ಸಚಿವ ಗೋಪಾಲಯ್ಯ ಅವರ ಸಮ್ಮುಖದಲ್ಲೇ ಬಿಜೆಪಿ ಕಾರ್ಯಕರ್ತರು ಮಾರಾಮಾರಿ ನಡೆದಿತ್ತು.

Join Whatsapp
Exit mobile version