ವಿಘ್ನ ನಿವಾರಣೆಗೆ ಗೋಮೂತ್ರ ಸಿಂಪಡಿಸಿ ,ಲಕ್ಷ್ಮಿ ಸೆಗಣಿಯಲ್ಲಿದ್ದಾಳೆ : ಯುಪಿ ಸಚಿವನ ವಿಲಕ್ಷಣ ಸಲಹೆ

Prasthutha|

ಫತೇಪುರ್: ಗೋಮೂತ್ರವನ್ನು ಸಿಂಪಡಿಸುವುದರಿಂದ ಮನೆಯಲ್ಲಿನ ಅಡೆತಡೆಗಳನ್ನು ನಿವಾರಿಸಬಹುದು ಮತ್ತು ಲಕ್ಷ್ಮಿ ಸಗಣಿಯಲ್ಲಿ ವಾಸಿಸುತ್ತಾಳೆ  ಎಂಬ ವಿಲಕ್ಷಣ ಹೇಳಿಕೆಯೊಂದನ್ನು ಉತ್ತರ ಪ್ರದೇಶದ ಸಚಿವ ಧರ್ಮಪಾಲ್ ಸಿಂಗ್ ನೀಡಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಪಶುಸಂಗೋಪನಾ ಸಚಿವ ಧರ್ಮಪಾಲ್ ಸಿಂಗ್ ಗಂಗಾ ದೇವಿಯು ಗೋವಿನ ಮೂತ್ರದಲ್ಲಿ ವಾಸಿಸುತ್ತಾಳೆ , ಅದನ್ನು ಮನೆಯಲ್ಲಿ ಸಿಂಪಡಿಸುವುದರಿಂದ ವಾಸ್ತು ದೋಷಗಳು ಅಥವಾ ಇತರ ಯಾವುದೇ ಅಡೆತಡೆಗಳನ್ನು ತೆಗೆದುಹಾಕುತ್ತದೆ , ಲಕ್ಷ್ಮಿಜಿ ಹಸುವಿನ ಸಗಣಿಯಲ್ಲಿ ವಾಸಿಸುತ್ತಾಳೆ ಎಂದು ಅವರು ಹೇಳಿದರು.

ಗೋಶಾಲೆಗಳಲ್ಲಿ ಹಸುಗಳ ದುಃಸ್ಥಿತಿಯ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಗೋಶಾಲೆಗಳ ಸುಧಾರಣೆಗಾಗಿ ತಮ್ಮ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ ಮತ್ತು ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಹೇಳಿದರು.

Join Whatsapp