Home ಟಾಪ್ ಸುದ್ದಿಗಳು ‘ಕಾನೂನು ಎಲ್ಲರಿಗೂ ಒಂದೇ’: ಮುರುಘಾ ಶರಣರ ಬಂಧನಕ್ಕೆ ಎಚ್. ವಿಶ್ವನಾಥ್ ಆಗ್ರಹ

‘ಕಾನೂನು ಎಲ್ಲರಿಗೂ ಒಂದೇ’: ಮುರುಘಾ ಶರಣರ ಬಂಧನಕ್ಕೆ ಎಚ್. ವಿಶ್ವನಾಥ್ ಆಗ್ರಹ

ಮೈಸೂರು: ಪೊಕ್ಸೊ ಪ್ರಕರಣ ದಾಖಲಾಗಿರುವ ಶಿವಮೂರ್ತಿ ಮುರುಘಾ ಶರಣರನ್ನು ಶೀಘ್ರದಲ್ಲೇ ಬಂಧಿಸಬೇಕು ಎಂದು ವಿಧಾನ‌ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣ ದಾಖಲಾಗಿ ಎರಡು ದಿನವಾದರೂ ಬಂಧನವಾಗಿಲ್ಲ. ಜನ ಪ್ರತಿನಿಧಿಗಳು ಈ ವಿಚಾರವಾಗಿ ಹಸ್ತಕ್ಷೇಪ ನಡೆಸುವುದು ಸರಿಯಲ್ಲ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯು ಯಾರದೋ ಒತ್ತಡಕ್ಕೆ ಮಣಿದು ಬಂಧನ ವಿಳಂಬ ಮಾಡುತ್ತಿದ್ದಾರೆ. ಅವರನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಿದ ವಿಶ್ವನಾಥ್, ಕಾನೂನು ಎಲ್ಲರಿಗೂ ಒಂದೇ ಎಂದು ಹೇಳಿದರು.

ಸದ್ಯ ಶರಣರ ಮೇಲೆ ಆರೋಪ ಇರುವುದರಿಂದ ಅವರು ಪೀಠ ತ್ಯಜಿಸಲಿ. ಆರೋಪಗಳಿಂದ ಮುಕ್ತವಾದ ಬಳಿಕ ಬೇಕಿದ್ದಲ್ಲಿ ಮತ್ತೆ ಪೀಠ ಅಲಂಕರಿಸಲಿ ಎಂದು ಅವರು ಹೇಳಿದರು.

Join Whatsapp
Exit mobile version