Home ಟಾಪ್ ಸುದ್ದಿಗಳು ದೂದ್ ಸಾಗರ ಬಳಿ ಭೂಕುಸಿತ: ಸಂಚಾರ ವ್ಯತ್ಯಯ

ದೂದ್ ಸಾಗರ ಬಳಿ ಭೂಕುಸಿತ: ಸಂಚಾರ ವ್ಯತ್ಯಯ

ಕಾರವಾರ: ಕರ್ನಾಟಕ-ಗೋವಾ ಗಡಿಭಾಗದಲ್ಲಿರುವ ದೂದ್ ಸಾಗರ ಜಲಪಾತದ ಸಮೀಪದ ರೈಲು ಮಾರ್ಗದ ಮೇಲೆ ಸೋಮವಾರ ನಸುಕಿನ ಜಾವ ಭೂಕುಸಿತ ಸಂಭವಿಸಿದೆ. ಪರಿಣಾಮ ಸ್ವಲ್ಪ ಹೊತ್ತು ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.


ಬೃಹತ್ ಗಾತ್ರದ ಕಲ್ಲುಗಳು, ಮಣ್ಣಿನ ರಾಶಿ ಹಳಿಗಳನ್ನು ಮುಚ್ಚಿ ಹಾಕಿದೆ.


ಬಳಿಕ ನೈರುತ್ಯ ರೈಲ್ವೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ತೆರವು ಕಾರ್ಯ ನಡೆಸಿದ್ದಾರೆ. ರೈಲ್ವೆ ಸಂಚಾರಕ್ಕೆ ಶೀಘ್ರ ಅನುವು ಮಾಡಿಕೊಟ್ಟಿರುವುದರಿಂದ ಯಾವುದೇ ಸಂಚಾರ ವ್ಯತ್ಯಯ ಆಗಿಲ್ಲ ಎಂದು ರೈಲ್ವೆ ಪೊಲೀಸ್ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

Join Whatsapp
Exit mobile version