Home ಕರಾವಳಿ ಮಂಗಳೂರು: ವಿರೋಧದ‌ ಮಧ್ಯೆಯೂ ಲೇಡಿಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ಎಂದು ಮರುನಾಮಕರಣ

ಮಂಗಳೂರು: ವಿರೋಧದ‌ ಮಧ್ಯೆಯೂ ಲೇಡಿಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ಎಂದು ಮರುನಾಮಕರಣ

ಮಂಗಳೂರು: ವಿರೋಧದ ಮಧ್ಯೆಯೂ  ಲೇಡಿಹಿಲ್ ಸರ್ಕಲ್​ ಗೆ ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ವೃತ್ತವೆಂದು ಮರುನಾಮಕರಣ ಮಾಡಲಾಯಿತು.

ಕಳೆದ ಏಳೆಂಟು ವರ್ಷಗಳಿಂದ ನಗರದ ಲೇಡಿಹಿಲ್ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತವೆಂದು ಹೆಸರಿಡಬೇಕೆಂಬ ಒತ್ತಾಯ ಕೇಳಿ ಬಂದಿತ್ತು. ಈಗ ಜಿಲ್ಲಾಡಳಿತ ಈ ವೃತ್ತಕ್ಕೆ ಮರು ನಾಮಕರಣ ಮರುನಾಮಕರಣ ಮಾಡಿದೆ.

ಬಳಿಕ ಸಚಿವ ಸುನಿಲ್ ಕುಮಾರ್ ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶವನ್ನು ನಾವೆಲ್ಲರೂ ಪಾಲಿಸಿಕೊಂಡು ಬಂದವರು. ಮಂಗಳೂರಿಗೂ ನಾರಾಯಣ ಗುರುಗಳಿಗೆ ವಿಶೇಷ ನಂಟು ಇದೆ. ಅಸ್ಪೃಶ್ಯತೆಯ ವಿರುದ್ಧ ಹೋರಾಟ ಮಾಡುತ್ತಾ ಕುದ್ರೋಳಿಯಲ್ಲಿ ಶಿವ ದೇಗುಲವನ್ನು ಅವರು ನಿರ್ಮಾಣ ಮಾಡಿದರು. ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರನ್ನು ಲೇಡಿಹಿಲ್ ಸರ್ಕಲ್​ ಗೆ ಇಡಬೇಕೆಂಬ ಒತ್ತಾಯ ಸಾಕಷ್ಟು ಸಮಯಗಳಿಂದ ಕೇಳಿ ಬಂದಿತ್ತು ಎಂದು ತಿಳಿಸಿದರು.

Join Whatsapp
Exit mobile version