ಲೇಡಿ ರೌಡಿ ಅನುರಾಧ ಬಂಧನ

Prasthutha|

ಲಕ್ನೋ, ಜು.31: ಉತ್ತರ ಪ್ರದೇಶದಲ್ಲಿ ನಿನ್ನೆ ಗ್ಯಾಂಗ್ ಸ್ಟರ್ ಕಾಲಾ ಜಾತೇದಿಯನ್ನು ಬಂಧಿಸಿದ ದೆಹಲಿ ವಿಶೇಷ ಪೊಲೀಸರು, ಇಂದು ರಾಜಸ್ತಾನದ ಕುಖ್ಯಾತ ಲೇಡಿ ಡಾನ್ ಅನುರಾಧ ಎಂಬಾಕೆಯನ್ನು ಬಂಧಿಸಿದ್ದಾರೆ. ರಾಜಸ್ತಾನ ಪೊಲೀಸರು ಆಕೆಯ ತಲೆಗೆ ರೂ. 10,000 ಬಹುಮಾನ ಘೋಷಿಸಿದ್ದರು.

- Advertisement -

ವಿಶೇಷ ಕೋಶ ಕೌಂಟರ್ ಇಂಟೆಲಿಜೆನ್ಸ್ ನ ಪೊಲೀಸ್ ಉಪ ಆಯುಕ್ತ ಮಾನಿಶ್ ಚಂದ್ರ ಅವರು, ಅನುರಾಧ 2017ರಲ್ಲಿ ರಾಜಸ್ತಾನದ ಚುರು ಜಿಲ್ಲೆಯಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಕೊಲ್ಲಲ್ಪಟ್ಟ ಗ್ಯಾಂಗ್ ಸ್ಟರ್ ಆನಂದಪಾಲ್ ಸಿಂಗ್ ಸಹವರ್ತಿಯಾಗಿದ್ದಳು ಎಂದು ತಿಳಿಸಿದರು. ಉತ್ತರ ಪ್ರದೇಶದ ಸಹರಾನ್ ಪುರದಲ್ಲಿ ಶುಕ್ರವಾರ ಗ್ಯಾಂಗ್ ಸ್ಟರ್ ಸಂದೀಪ್ ಅಲಿಯಾಸ್ ಕಾಲಾ ಜಾತೇದಿ ಬಂಧನದ ಬೆನ್ನಿಗೆ ಈ ಬಂಧನ ನಡೆಸಿರುವುದಾಗಿ ಅವರು ತಿಳಿಸಿದರು.

ದೆಹಲಿ ಪೊಲೀಸರು ಜಾತೇದಿ ವಿರುದ್ಧ ಎಂಸಿಓಸಿಎ ಉಗ್ರ ಕಾಯ್ದೆಯನ್ನು ಬಳಸಿದ್ದಾರೆ. ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್ ಬಂಧನವಾದ ಚಾತ್ರಸಾಲ್ ಸ್ಟೇಡಿಯಂ ಹೊಡೆದಾಟದಲ್ಲಿ ಗಾಯಗೊಂಡಿದ್ದ ಸೋನು ಎಂಬವನ ವಿಚಾರಣೆಯಿಂದ ಈ ಗ್ಯಾಂಗ್ ಸ್ಟರ್ ಗಳ ಮಾಹಿತಿ ದೆಹಲಿ ಪೋಲೀಸರಿಗೆ ಲಭ್ಯವಾಗಿದೆ.

Join Whatsapp