Home ಟಾಪ್ ಸುದ್ದಿಗಳು ಸಾಕ್ಷ್ಯಾಧಾರ ಕೊರತೆ: ಪಾಕ್ ಭಯೋತ್ಪಾದಕರೊಂದಿಗೆ ಸಂಪರ್ಕ ಆರೋಪದಲ್ಲಿ ಬಂಧಿತರಾದವರ ಬಿಡುಗಡೆ

ಸಾಕ್ಷ್ಯಾಧಾರ ಕೊರತೆ: ಪಾಕ್ ಭಯೋತ್ಪಾದಕರೊಂದಿಗೆ ಸಂಪರ್ಕ ಆರೋಪದಲ್ಲಿ ಬಂಧಿತರಾದವರ ಬಿಡುಗಡೆ

ನವದೆಹಲಿ: ಶಂಕಿತ ಭಯೋತ್ಪಾದನೆ ಆರೋಪದಲ್ಲಿ ನಿನ್ನೆ ಬಂಧಿತರಾದ ಆರೋಪಿಗಳ ವಿರುದ್ಧ ಯಾವುದೇ ಸಾಕ್ಷಿಗಳು ಕಂಡು ಬಾರದ ಹಿನ್ನೆಲೆಯಲ್ಲಿ ಅವರನ್ನು ಬಿಡುಗಡೆಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಾಕ್ ಮೂಲದ ಭಯೋತ್ಪಾದನೆ ಸಂಘಟನೆಗಳೊಂದಿಗೆ ಸಂಪರ್ಕದ ಆರೋಪದಲ್ಲಿ ಇಂತಿಯಾಝ್ ಹಾಗೂ ಮುಹಮ್ಮದ್ ಜಲೀಲ್ ಅವರನ್ನು ಬಂಧಿಸಲಾಗಿತ್ತು. ಇವರ ವಿರುದ್ಧ ಯಾವುದೇ ಪುರಾವೆ ಲಭಿಸದ ಹಿನ್ನೆಲೆಯಲ್ಲಿ ಇಂದು ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೊಬ್ಬ ಶಂಕಿತ ತಾಹಿರ್ ಎಂಬಾತ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.

ದೆಹಲಿ ಪೊಲೀಸರ ಸ್ಪೆಷಲ್ ಸೆಲ್, ಪಾಕಿಸ್ತಾನ ಮೂಲದ ಭಯೋತ್ಪಾದನಾ ಸಂಘಟನೆಗಳೊಂದಿಗೆ ಸಂಪರ್ಕದ ಆರೋಪದಲ್ಲಿ ಆರು ಮಂದಿಯನ್ನು ಬಂಧಿಸಿತ್ತು. ಬಂಧಿತರು ದೇಶಾದ್ಯಂತ ಹತ್ಯೆ ಮತ್ತು ಸ್ಫೋಟಗಳನ್ನು ನಡೆಸಲು ಯೋಜನೆ ರೂಪಿಸಿದ್ದರು ಎಂದು ಆರೋಪಿಸಲಾಗಿತ್ತು.

Join Whatsapp
Exit mobile version