Home ಟಾಪ್ ಸುದ್ದಿಗಳು ರಜನಿಕಾಂತ್ ‘ಸಂಘಿ’ ಅಲ್ಲ, ಸಂಘಿ ಆಗಿದ್ದರೆ ‘ಲಾಲ್ ಸಲಾಂ’ ಸಿನಿಮಾ ಮಾಡುತ್ತಿರಲಿಲ್ಲ: ಪುತ್ರಿ ಐಶ್ವರ್ಯ

ರಜನಿಕಾಂತ್ ‘ಸಂಘಿ’ ಅಲ್ಲ, ಸಂಘಿ ಆಗಿದ್ದರೆ ‘ಲಾಲ್ ಸಲಾಂ’ ಸಿನಿಮಾ ಮಾಡುತ್ತಿರಲಿಲ್ಲ: ಪುತ್ರಿ ಐಶ್ವರ್ಯ

ಚೆನ್ನೈ: ಸೂಪರ್‌ ಸ್ಟಾರ್‌ ರಜಿನಿಕಾಂತ್ ‘ಸಂಘಿ’ ಅಲ್ಲ. ‘ಸಂಘಿ’ ಆಗಿದ್ದರೆ ಅವರು ಲಾಲ್ ಸಲಾಂ ಸಿನಿಮಾ ಮಾಡುತ್ತಿರಲಿಲ್ಲ ಎಂದು ನಟ ರಜಿನಿಕಾಂತ್ ಪುತ್ರಿ ಐಶ್ವರ್ಯ
ಹೇಳಿದ್ದಾರೆ.


ರಜಿನಿಕಾಂತ್ ಅಭಿನಯದ ಕ್ರೀಡಾ ಕೇಂದ್ರಿತ ಸಿನಿಮಾ “ಲಾಲ್ ಸಲಾಂ” ನ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಪುತ್ರಿ ಐಶ್ವರ್ಯ, ನಾನು ಸಾಮಾಜಿಕ ಮಾಧ್ಯಮದಿಂದ ದೂರವಿರಲು ಪ್ರಯತ್ನಿಸುತ್ತೇನೆ. ಆದರೆ ನನ್ನ ತಂಡವು ಜನರು ಏನು ಮಾತನಾಡುತ್ತಾರೆ ಎಂಬುದನ್ನು ನನಗೆ ತೋರಿಸುತ್ತಲೇ ಇರುತ್ತಾರೆ. ಇತ್ತೀಚೆಗ ರಜನಿಕಾಂತ್ಗೆ ಜನರು ‘ಸಂಘಿ’ ಎಂಬ ಒಂದು ಪದವನ್ನು ಹೇಳುತ್ತಿದ್ದಾರೆ ಮತ್ತು ಜನರು ಅವರನ್ನು ಏಕೆ ಆ ರೀತಿ ಕರೆಯುತ್ತಾರೆಂದು ನನಗೆ ಅರ್ಥವಾಗುತ್ತಿಲ್ಲ. ನಾನು ಇದನ್ನು ಹೇಳುತ್ತೇನೆ, ಸೂಪರ್ಸ್ಟಾರ್ ರಜನಿಕಾಂತ್ ‘ಸಂಘಿ’ ಅಲ್ಲ. ‘ಸಂಘಿ’ ಆಗಿದ್ದರೆ ಲಾಲ್ ಸಲಾಂ ಮಾಡುತ್ತಿರಲಿಲ್ಲ. ಈ ಸಿನಿಮಾವನ್ನು ಮಾನವೀಯತೆ ಇರುವ ವ್ಯಕ್ತಿಯಿಂದ ಮಾತ್ರ ಮಾಡಲು ಸಾಧ್ಯ ಎಂದು ಹೇಳಿದ್ದಾರೆ.

ಫೆಬ್ರವರಿ 9ರಂದು ಲಾಲ್ ಸಲಾಮ್‌ ಚಿತ್ರ ಬಿಡುಗಡೆಯಾಗಲಿದ್ದು, ಚಿತ್ರದಲ್ಲಿ ರಜನಿಕಾಂತ್ ಮುಸ್ಲಿಂ ಪಾತ್ರದ ‘ಮೊಯ್ದೀನ್ ಭಾಯ್’ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

Join Whatsapp
Exit mobile version